ಎಸ್‌ಎಂಎ ದ.ಕ ಜಿಲ್ಲೆ ಈಸ್ಟ್ ವಾರ್ಷಿಕ ಕೌನ್ಸಿಲ್ ಜಿಲ್ಲಾ, ಝೋನಲ್ ವ್ಯಾಪ್ತಿಯ ನಾಯಕರು ಭಾಗಿ

0

ಪುತ್ತೂರು: ಸುನ್ನೀ ಮ್ಯಾನೇಜ್‌ಮೆಂಟ್ ಅಸೋಸಿಯೇಶನ್(ಎಸ್‌ಎಂಎ) ದ.ಕ ಜಿಲ್ಲೆ ಈಸ್ಟ್ ಇದರ ವಾರ್ಷಿಕ ಕೌನ್ಸಿಲ್ ಬೆಳಿಯೂರುಕಟ್ಟೆ ಮಂಜ ದರ್ಗಾ ಶರೀಫ್ ಸಭಾಂಗಣದಲ್ಲಿ ಸೆ.೨೧ರಂದು ನಡೆಯಿತು.

ಸಭೆ ಉದ್ಘಾಟಿಸಿದ ಬದ್ರುದ್ದೀನ್ ಅಝ್‌ಹರಿ ಕೈಕಂಬ ಮಾತನಾಡಿ ಎಸ್‌ಎಂಎ ಸಮಿತಿಯು ಉಲಮಾ ಮತ್ತು ಉಮರಾ ಒಟ್ಟಾಗಿರುವ ಅಪೂರ್ವ ಸಂಘಟನೆಯಾಗಿದ್ದು ಎಸ್‌ಎಂಎ ತನ್ನ ಜವಾಬ್ದಾರಿ ಏನೆಂದು ಅರಿತು ಸಮಾಜದಲ್ಲಿ, ಸಮುದಾಯದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.

ಎಸ್‌ಎಂಎ ದ.ಕ ಈಸ್ಟ್ ಜಿಲ್ಲೆ ಅಧ್ಯಕ್ಷ ಸಯ್ಯದ್ ಸಾದಾತ್ ತಂಙಳ್ ಕರ್ವೇಲ್ ಅಧ್ಯಕ್ಷತೆ ವಹಿಸಿದ್ದರು. ಎಸ್‌ಎಂಎ ವಿಟ್ಲ ಝೋನಲ್ ಅಧ್ಯಕ್ಷ ಪಿ.ಎಂ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ, ಹಂಝ ಮದನಿ ಮಿತ್ತೂರು, ಶಹೀರ್ ತಂಙಳ್, ಎಸ್‌ಎಂಎ ದ.ಕ ಈಸ್ಟ್ ಜಿಲ್ಲಾ ಕೋಶಾಧಿಕಾರಿ ಯೂಸುಫ್ ಗೌಸಿಯಾ ಸಾಜ, ರಾಜ್ಯ ಉಪಾಧ್ಯಕ್ಷ ಹಮೀದ್ ಹಾಜಿ ಕೊಡುಂಗಾಯಿ, ರಾಜ್ಯ ಕಾರ್ಯದರ್ಶಿಗಳಾದ ಅಶ್ರಫ್ ಸಖಾಫಿ ಮಾಡಾವು, ಸ್ವಾದಿಕ್ ಮಾಸ್ಟರ್, ಉಕ್ಕುಡ ಮುದರ್ರಿಸ್ ಶರೀಫ್ ಸಖಾಫಿ, ಲತೀಫ್ ಹನೀಫ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭೆಯಲ್ಲಿ ಎಸ್‌ಎಂಎ ಜಿಲ್ಲಾ ಹಾಗೂ ಝೋನಲ್ ವ್ಯಾಪ್ತಿಯ ನಾಯಕರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here