ಪುತ್ತೂರು ಗೃಹ ನಿರ್ಮಾಣ ಸಹಕಾರ ಸಂಘದ ಮಹಾಸಭೆ

0

  • ರೂ. 1.16 ಲಕ್ಷ ಲಾಭ, ಶೇ.10 ಡಿವಿಡೆಂಡ್ ಘೋಷಣೆ

ಪುತ್ತೂರು: ಪುತ್ತೂರು ಗೃಹ ನಿರ್ಮಾಣ ಸಹಕಾರ ಸಂಘದ ಮಹಾಸಭೆಯು ಸೆ.೨೨ರಂದು ಸಂಜೆ ಬೊಳುವಾರಿನಲ್ಲಿರುವ ಹಿರಣ್ಯ ಕಾಂಪ್ಲೆಕ್ಸ್‌ನ ಸಂಘದ ಕಚೇರಿಯಲ್ಲಿ ನಡೆಯಿತು.

ಸಂಘದ ಅಧ್ಯಕ್ಷ ಪಿ.ಪಾಂಡುರಂಗ ಹೆಗ್ಡೆಯವರ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಘವು ಒಟ್ಟು ರೂ. ೭೦,೧೧,೩೬೪ ವ್ಯವಹಾರ ನಡೆಸಿ ರೂ. ೧,೧೬೬೭೪ ಲಾಭ ಗಳಿಸಿದೆ. ಲಾಭವನ್ನು ಸರಕಾರಿ ನಿಯಮದಂತೆ ವಿವಿಧ ವಿಭಾಗದಲ್ಲಿ ಹಂಚಿ ಈ ಭಾರಿ ಸದಸ್ಯರಿಗೆ ಶೇ.೧೦ ಡಿವಿಡೆಂಡ್ ನೀಡುವುದಾಗಿ ಅವರು ಘೋಷಣೆ ಮಾಡಿದರು. ಸಂಘದ ಕಾರ್ಯನಿರ್ವಹಣಾಧಿಕಾರಿ ಪುರುಷೋತ್ತಮ ಶೆಟ್ಟಿಯವರು ವರದಿ ಮತ್ತು ಲೆಕ್ಕಪತ್ರ ಮಂಡಿಸಿದರು. ನಿರ್ದೇಶಕರಾದ ಅಜಿತ್ ಕುಮಾರ್ ಕೆ, ರಘುನಾಥ್ ಬಿ, ಅಚ್ಚುತ ಭಟ್ ಕೆ, ನಾಗೇಶ್ ರಾವ್ ಎ, ಆನಂದ ಆಚಾರ್ಯ, ಸುಧಾ ಕುಮಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸದಸ್ಯರು ಸಲಹೆ ಸೂಚನೆ ನೀಡಿದರು. ನಿರ್ದೇಶಕಿ ಜ್ಯೋತಿ ಆರ್ ನಾಯಕ್ ಪ್ರಾರ್ಥಿಸಿದರು. ಸಂಘದ ಉಪಾಧ್ಯಕ್ಷ ರಾಮಮೋಹನ್ ರೈ ಎಂ.ಕೆ ವಂದಿಸಿದರು.

LEAVE A REPLY

Please enter your comment!
Please enter your name here