ಸೆ.26ರಿಂದ ಲಕ್ಷ್ಮೀ ದೇವಿ ಬೆಟ್ಟದ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ನವರಾತ್ರಿ ಸಂಭ್ರಮ

0

  • ಸೆ.26 ತುಲಾಭಾರ ಸೇವೆ
  • ಅ.1 ಹೊಸಅಕ್ಕಿ ನೈವೇದ್ಯ ಸಮರ್ಪಣೆ
  • ಅ.2 ಚಂಡಿಕಾ ಯಾಗ
  • ಅ.4 ಆಯುಧಾ ಪೂಜೆ

ಪುತ್ತೂರು: ರೈಲು ನಿಲ್ದಾಣದ ಬಳಿಯ ಕಾರಣಿಕ ಕ್ಷೇತ್ರ ಲಕ್ಷ್ಮೀದೇವಿ ಬೆಟ್ಟದ ಶ್ರೀಮಹಾಲಕ್ಷ್ಮೀ ದೇವಸ್ಥಾನದಲ್ಲಿ ನವರಾತ್ರಿ ಉತ್ಸವವು ಸೆ.26ರಿಂದ ಪ್ರಾರಂಭಗೊಂಡು ಅ.4ರ ತನಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ಸೆ.೨೬ರಂದು ಬೆಳಿಗ್ಗೆ ಗಣಪತಿ ಹೋಮದೊಂದಿಗೆ ನವರಾತ್ರಿ ಉತ್ಸವಕ್ಕೆ ಚಾಲನೆ ದೊರೆಯಲಿದೆ. ಬಳಿಕ ನಾಗ ತಂಬಿಲ, ಪಾಷಾಣಮೂರ್ತಿ ಹಾಗೂ ಗುಳಿಗ ದೈವಕ್ಕೆ ತಂಬಿಲ, ನಂತರ ತುಲಾಭಾರ ಸೇವೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಶ್ರೀಲಕ್ಷ್ಮೀ ದೇವಿ ಭಕ್ತವೃಂದದವರಿಂದ ಭಜನೆ, ಸೆ.೨೭ ಬೆಳಿಗ್ಗೆ ಚಂದ್ರ ಶೇಖರ್ ಮೂಡಾಯೂರು ಬಳಗದವರಿಂದ ಸ್ಯಾಕ್ಸೋಫೋನ್ ವಾದನ, ಮಧ್ಯಾಹ್ನ ಮಹಾಪೂಜೆ, ಸಂಗೆ ಭಜನೆ, ಮಹಾಪೂಜೆ, ಸೆ.೨೮ರಂದು ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಸಂಜೆ ಶ್ರೀಮಹಾಲಕ್ಷ್ಮೀ ಮಹಿಳಾ ಭಜನಾ ಮಂಡಳಿ ಸುಳ್ಯಪದವು ಇವರಿಂದ ಭಜನೆ, ಮಹಾಪೂಜೆ ಪ್ರಸಾದ ವಿತರಣೆ, ಸೆ.೨೯ರಂದು ಬೆಳಿಗ್ಗೆ ಒಡಿಯೂರು ಶ್ರೀ ವಜ್ರಮಾತ ಮಹಿಳಾ ಭಜನಾ ಮಂಡಳಿಯವರಿಂದ ಭಜನೆ, ಮಕ್ಕಳಿಗೆ ಅಕ್ಷರಾಭ್ಯಾಸ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಸಂಜೆ ಭಜನೆ, ಮಹಾಪೂಜೆ, ಸೆ.೩೦ರಂದು ಬೆಳಿಗ್ಗೆ ಕಿರಣ್ ಕುಮಾರ್ ಗಾನಸಿರಿ ಬಳಗದವರಿಂದ ಭಜನೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಸಂಜೆ ಭಜನೆ, ಮಹಾಪೂಜೆ, ಅ.೧ರಂದು ದೇವರಿಗೆ ಹೊಸ ಅಕ್ಕಿ ನೈವೇದ್ಯ ಸಮರ್ಪಣೆ, ಮಹಾಪೂಜೆ, ಸಂಜೆ ಪ್ರೇಮಲತಾ ಬಳಗ ಶ್ರೀದೇವಿ ನಿಲಯ ಕಟ್ಟೆ ಇವರಿಂದ ಭಜನೆ, ಮಹಾಪೂಜೆ,

ಅ.೨ ಚಂಡಿಕಾ ಯಾಗ:
ನವರಾತ್ರಿಯಲ್ಲಿ ಪ್ರತಿ ವರ್ಷ ವಿಶೇಷವಾಗಿ ನಡೆಸುವ ಚಂಡಿಕಾಯಾಗವು ಅ.೨ರಂದು ನಡೆಯಲಿದೆ. ಬೆಳಿಗ್ಗೆ ಗಣಪತಿಹೋಮ, ಚಂಡಿಕಾ ಯಾಗ ಪ್ರಾರಂಭ, ಪದ್ಮನಾಭ ಇವರಿಂದ ಸ್ಯಾಕ್ಸೋಫೋನ್ ವಾದನ, ಮಧ್ಯಾಹ್ನ ಯಾಗದ ಪೂರ್ಣಾಹುತಿ, ಮಹಾಪೂಜೆ, ದೇವಿ ದರ್ಶನ, ಪ್ರಸಾದ ವಿತರಣೆ ನಡೆಯಲಿದೆ. ಸಂಜೆ ಬನ್ನೂರು ಸ್ಪೂರ್ತಿ ಯುವಕ-ಯುವತಿ ಮಂಡಲದವರಿಂದ ಭಜನೆ, ಮಹಾಪೂಜೆ ನಡೆಯಲಿದೆ. ಅ.೩ರಂದು ಮಧ್ಯಾಹ್ನ ಮಹಾಪೂಜೆ, ಸಂಜೆ ಶ್ರೀ ಲಕ್ಷ್ಮೀದೇವಿ ಭಕ್ತವೃಂದದವರಿಂದ ಭಜನೆ, ಸೆ.೪ರಂದು ವಿದುಷಿ ಪವಿತ್ರ ರೂಪೇಶ್ ಬಳಗದವರಿಂದ ಭಜನೆಮಧ್ಯಾಹ್ನ ಮಹಾಪೂಜೆ, ಸಂಜೆ ಆಯುಧ ಪೂಜೆ ಹಾಗೂ ರಾತ್ರಿ ಶ್ರೀಲಕ್ಷ್ಮೀದೇವಿ ಭಕ್ತವೃಂದದವರಿಂದ ಭಜನೆಯೊಂದಿಗೆ ನವರಾತ್ರಿ ಉತ್ಸವವು ಸಂಪನ್ನಗೊಳ್ಳಲಿದೆ. ಪ್ರತಿದಿನ ಮಧ್ಯಾಹ್ನ ಹಾಗೂ ರಾತ್ರಿ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ ಎಂದು ಕ್ಷೇತ್ರದ ಧರ್ಮದರ್ಶಿ ಐತ್ತಪ್ಪ ಸಪಲ್ಯ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here