ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ಕ್ಷೇತ್ರದ ಬ್ರಹ್ಮಕಲಶೋತ್ಸವದ ಹಿನ್ನೆಲೆ ಕೆರೆಕೋಡಿ ವಲಯ ಸಮಿತಿ ರಚನೆ

0

ವಿಟ್ಲ: ಮಾಣಿಲ ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ಕ್ಷೇತ್ರದಲ್ಲಿ 2023ರ ಮಾರ್ಚ್ ತಿಂಗಳ 5 ರಿಂದ 10 ತನಕ ನಡೆಯಲಿರುವ ಬ್ರಹ್ಮಕಲಶೋತ್ಸವದ ಹಿನ್ನೆಲೆಯಲ್ಲಿ ಕ್ಷೇತ್ರದ ಧರ್ಮದರ್ಶಿ ಶ್ರೀ ಶ್ರೀಕೃಷ್ಣ ಗುರೂಜಿಯವರ ಮಾರ್ಗದರ್ಶನದಲ್ಲಿ ಉಪ್ಪಿನಂಗಡಿ ಸಮೀಪದ ಹೀರೆಬಂಡಾಡಿ ಕೆರೆ ಕೆರೆಕೋಡಿ ಕೊರಗತನಿಯ ಸಾನಿಧ್ಯದಲ್ಲಿ ವಲಯ ಸಮಿತಿಯ ರಚನೆ ಮಾಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಂದರ ಪೂಜಾರಿಯವರು ವಹಿಸಿದರು. ಕುಕ್ಕಾಜೆ ಕ್ಷೇತ್ರದ ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀಧರ ಬಾಳೆಕಲ್ಲು ಜೀರ್ಣೋದ್ಧಾರದ ಬಗ್ಗೆ ಹಾಗೂ ಬ್ರಹ್ಮಕಲಶೋತ್ಸವದ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಕೆರೆಕೋಡಿ ವಲಯ ಸಮಿತಿಯನ್ನು ರಚಿಸಲಾಯಿತು. ಸಮಿತಿಯ ಅಧ್ಯಕ್ಷರಾಗಿ ಸುಂದರ ಪೂಜಾರಿ ಎಲಿಯ, ಉಪಾಧ್ಯಕ್ಷರಾಗಿ ದೇವಪ್ಪ ಪಡ್ಪು, ಕಾರ್ಯದರ್ಶಿಯಾಗಿ ಅಶೋಕುಮಾರ್ ಪಡ್ಪು, ಜತೆ ಕಾರ್ಯದರ್ಶಿಯಾಗಿ ಸದಾಶಿವ ಎಲಿಯ, ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ರುಕ್ಮಯ ಪೂಜಾರಿ ಕಾರದಕೋಡಿ, ಚಂದ್ರಶೇಖರ ಅನವುಗುರಿ, ಅರ್ಪಿತ್ ಬರೆಕೆರೆ, ಮಾದವ ಗೌಡ ಹೆನ್ನಾಳ, ಬಾಬು ಪೂಜಾರಿ ಹೆನ್ನಾಳ, ರಮೇಶ್ ಪೂಜಾರಿ ಹೆನ್ನಾಳ, ಅನಿಲ್ ಬರೆಕೆರೆ, ದಾಮೋದರ ಎಲಿಯ ವಾಸಪ್ಪ ಹಿರೇಬಂಡಾಡಿ, ಲೋಕೇಶ್ ಕೆದುಮೂಳೆ ರವರನ್ನು ಆಯ್ಕೆ ಮಾಡಲಾಯಿತು. ವಾಸಪ್ಪ ಹಿರೇಬಂಡಾಡಿ ಸ್ವಾಗತಿಸಿ, ಅಶೋಕ್ ಕುಮಾರ್ ಪಡ್ಪು ವಂದಿಸಿದರು.

LEAVE A REPLY

Please enter your comment!
Please enter your name here