ಜಿ. ಎಲ್. ಆಚಾರ್ಯ ಸ್ವರ್ಣ ಮಳಿಗೆಗಳಲ್ಲಿ ‘ಜಿ. ಎಲ್. ಸ್ವರ್ಣ ಹಬ್ಬ’

0

ಪುತ್ತೂರು: ನವರಾತ್ರಿ ಹಾಗೂ ದಸರಾ ಹಬ್ಬದ ಪ್ರಯುಕ್ತ ಜಿ. ಎಲ್. ಆಚಾರ್ಯ ಜ್ಯುವೆಲ್ಲರ್ಸ್ ಪುತ್ತೂರು, ಹಾಸನ, ಸುಳ್ಯ ಹಾಗೂ ಕುಶಾಲನಗರ ಮಳಿಗೆಗಳಲ್ಲಿ ವಿಶೇಷ ಕೊಡುಗೆಗಳೊಂದಿಗೆ ‘ಜಿ. ಎಲ್. ಸ್ವರ್ಣ ಹಬ್ಬ’ ಏರ್ಪಡಿಸಿದ್ದಾರೆ

ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 05ರವರೆಗೆ ನಡೆಯುವ ಈ ವಿಶೇಷ ಸೇಲ್‌ನಲ್ಲಿ ಗ್ರಾಹಕರಿಗೆ ಪ್ರತೀ ಒಂದು ಗ್ರಾಂ ಚಿನ್ನ ಖರೀದಿಗೆ 1 ಗ್ರಾಂ ಬೆಳ್ಳಿಯ ನಾಣ್ಯ ಉಚಿತ, ಪ್ರತೀ ಒಂದು ಕ್ಯಾರೆಟ್ ವಜ್ರಾಭರಣ ಖರೀದಿಗೆ 1 ಗ್ರಾಂ ಚಿನ್ನದ ನಾಣ್ಯ ಉಚಿತ, ಬೆಳ್ಳಿಯ ಎಂಆರ್‌ಪಿ ಆಭರಣಗಳ ಮೇಲೆ 5% ರಿಯಾಯಿತಿ ಹಾಗೂ ಪ್ರತೀ 1 ಕೆ.ಜಿ ಬೆಳ್ಳಿಯ ಸಾಮಾಗ್ರಿಗಳ ಮೇಲೆ ರೂ. 2,000/- ರಿಯಾಯಿತಿ ಇದೆ. ಪ್ರಸ್ತುತ ಗ್ರಾಹಕರು ಚಿನ್ನದ ದರ ಇಳಿಕೆಯ ಪ್ರಯೋಜನವನ್ನು ಪಡೆಯಬಹುದಾಗಿದೆ. ದಿನಾಂಕ 26-09-2022ರಂದು ‘ಜಿ. ಎಲ್. ಸ್ವರ್ಣ ಹಬ್ಬ’ವನ್ನು ಪುತ್ತೂರು ಶೋರೂಂನಲ್ಲಿ ಪುತ್ತೂರಿನ ಖ್ಯಾತ ವಕೀಲರಾದ ಮಹೇಶ್ ಕಜೆ ಮತ್ತು ದೀಪಿಕಾ ಮಹೇಶ್ ಕಜೆ ದಂಪತಿ ಉದ್ಘಾಟಿಸಲಿದ್ದಾರೆ.

916 ಪರಿಶುದ್ಧತೆಯಲ್ಲಿ ನೂರಾರು ವಿನ್ಯಾಸದ ಮದುವೆ ಚಿನ್ನಾಭರಣಗಳು, ಕರಿಮಣಿ ಸರಗಳು, ಮುತ್ತಿನ ಹಾರಗಳು, ‘ಪ್ರಾಚಿ’ ಲೈಟ್ ವೇಟ್ ಆಂಟಿಕ್ ಚಿನ್ನಾಭರಣಗಳು, ಜಗಮಗಿಸುವ ಅಂತರಾಷ್ಟ್ರೀಯ ಲ್ಯಾಬ್ ಸರ್ಟಿಫೈಡ್ ‘ಗ್ಲೋ’ ವಜ್ರಾಭರಣಗಳು ಕಂಗೊಳಿಸುವ ಬೆಳ್ಳಿ ಆಭರಣಗಳು ಹಾಗೂ ಬೆಳ್ಳಿ ಪರಿಕರಗಳ ಮಹಾಪೂರವೇ ಇಲ್ಲಿದೆ.

65 ವರ್ಷಗಳ ಸ್ವರ್ಣ ಪರಂಪರೆಯೊಂದಿಗೆ ಪಾರದರ್ಶಕ ವ್ಯವಹಾರ, ನ್ಯಾಯೋಚಿತ ತಯಾರಿಕ ವೆಚ್ಚ ಹಾಗೂ ನಗುಮೊಗದ ಸೇವೆಯೊಂದಿಗೆ ಜಿ. ಎಲ್. ಆಚಾರ್ಯ ಜ್ಯುವೆಲ್ಲರ್‍ಸ್ ಜನಮಾನಸದಲ್ಲಿ ‘ಪ್ರತೀ ಪೀಳಿಗೆಯ ಪ್ರೀತಿಯ ಮಳಿಗೆ’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

LEAVE A REPLY

Please enter your comment!
Please enter your name here