ಅಸೌಖ್ಯದಿಂದ ಚಿಕಿತ್ಸೆಯಲ್ಲಿರುವ ಮಾಣಿ ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆಯ ಹಳೆ ವಿದ್ಯಾರ್ಥಿ ಸಚಿನ್ ಕೊಟ್ಟಾರಿ ರವರಿಗೆ ಶಾಲಾ ವತಿಯಿಂದ ಧನಸಹಾಯ

0

ವಿಟ್ಲ: ಕಿಡ್ನಿ ವೈಫಲ್ಯಕ್ಕೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿರುವ ಮಾಣಿ‌ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ಹಳೆ ವಿದ್ಯಾರ್ಥಿ ಕಲ್ಲಡ್ಕ ನಿವಾಸಿ ಸಚಿನ್ ಕೊಟ್ಟಾರಿಯವರಿಗೆ ಶಾಲಾ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗದವರು ಸಂಗ್ರಹಿಸಿದ ಸುಮಾರು ಮೂವತ್ತಮೂರು ಸಾವಿರ ರೂಪಾಯಿ ಹಣವನ್ನು ಶಾಲಾ ಸಂಚಾಲಕರಾದ ಪ್ರಹಲ್ಲಾದ್ ಜೆ. ಶೆಟ್ಟಿರವರು ಬಾಲಕನ ಪೋಷಕರಿಗೆ ಹಸ್ತಾಂತರ ಮಾಡಿದರು.


ಅದರ ಮರುಜೋಡಣೆ ಗಾಗಿ ಸುಮಾರು 15 ಲಕ್ಷ ರೂಪಾಯಿ ವೆಚ್ಚದಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಅವರು ಇದೀಗ ಮನೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.

LEAVE A REPLY

Please enter your comment!
Please enter your name here