ಎನ್.ಎಸ್.ಯು.ಐ ಉಪ್ಪಿನಂಗಡಿ ನಗರ ನೂತನ ಸಮಿತಿ ರಚನೆ

0

ಪುತ್ತೂರು:ಎನ್.ಎಸ್.ಯು.ಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ನೇತೃತ್ವದಲ್ಲಿ ಟೀಂ ಫ್ಯಾಬುಲಸ್ ಉಪ್ಪಿನಂಗಡಿ ಆಶ್ರಯದಲ್ಲಿ NSUI ಉಪ್ಪಿನಂಗಡಿ ನಗರ ಸಮಿತಿ ರಚನೆ ಸಭೆಯು ನಗರದ ರೋಟರಿ ಕ್ಲಬ್ ಹಾಲ್ ನಲ್ಲಿ ಸೆ.24ರಂದು ನಡೆಯಿತು. ಈ ಸಂದರ್ಭದಲ್ಲಿ NSUI ಉಪ್ಪಿನಂಗಡಿ ನಗರ ನೂತನ ಸಮಿತಿಯ ಅಧ್ಯಕ್ಷರನ್ನಾಗಿ ನಿಹಾಲ್ ಹಾಗೂ ಇತರ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.

ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜರಾಂ ಕೆ.ಬಿ ಅವರು ಪ್ರಾಸ್ತಾವಿಕ ಭಾಷಣ ಮಾಡಿದರು. NSUI ಮುಖಂಡ ಸೈಫುದ್ದೀನ್ ಕಾರ್ಯಕ್ರಮ ನಿರೂಪಿಸಿದರು. NSUI ಪುತ್ತೂರು ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಚಿರಾಗ್ ರೈ ಅವರು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಯುವ ಮುಖಂಡರಾದ ಶಬೀರ್ ಕೆಂಪಿ, NSUI ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸವಾದ್, NSUI ಕರ್ನಾಟಕ ರಾಜ್ಯ ಉಪಾಧ್ಯಕ್ಷ ಫಾರೂಕ್, NSUI ಪ್ರಧಾನ ಕಾರ್ಯದರ್ಶಿ ಅನ್ವಿತ್ ಕಟೀಲ್, NSUI ದಕ್ಷಿಣ ಕನ್ನಡ ಕಾರ್ಯಾಧ್ಯಕ್ಷ ಪವನ್ ಸಾಲ್ಯಾನ್, ಪ್ರಧಾನ ಕಾರ್ಯದರ್ಶಿ ಬಾತೀಷ್ ಅಳಕೆಮಜಲು, NSUI ಮುಲ್ಕಿ – ಮೂಡಬಿದಿರೆ ಅಧ್ಯಕ್ಷ ಸೃಜನ್ ಅಂಚನ್, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಫಾರೂಕ್ ಪೆರ್ನೆ,ಟೀಂ ಫ್ಯಾಬುಲಸ್ ಉಪ್ಪಿನಂಗಡಿಯ ಸಂಸ್ಥಾಪಕರಾದ ಸಫ್ವಾನ್ ಹಾಗೂ ಝೈನ್, NSUI ಸಾಮಾಜಿಕ ಜಾಲತಾಣ ವಿಭಾಗದ ರಾಷ್ಟ್ರೀಯ ಸಹ-ಸಂಚಾಲಕ ನಜೀಬ್ ಮಂಚಿ, ಯುವ ಮುಖಂಡರಾದ ಪ್ರಹ್ಲಾದ್, ಅನ್ಸಾರುದ್ದೀನ್ ಸಾಲ್ಮರ ಹಾಗೂ ಊರಿನ ಪ್ರಮುಖರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here