ಕಾವು: ಗೋಪೂಜಾ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ

0

  • ಗೌರವಾಧ್ಯಕ್ಷರಾಗಿ ಭಾಸ್ಕರ ಬಲ್ಯಾಯ,ಅಧ್ಯಕ್ಷರಾಗಿ ನಹುಷಾ ಭಟ್ ಪಳನೀರು, ಕಾರ್ಯದರ್ಶಿ ಶಿವಕುಮಾರ್ ಕಾವು

ಕಾವು:ವಿಶ್ವ ಹಿಂದೂ ಪರಿಷತ್ ಬಜರಂಗದಳ ಕಾವು ಘಟಕ ಇದರ ಸಹಕಾರದೊಂದಿಗೆ ಗೋಪೂಜಾ ಸಮಿತಿ ಕಾವು ಇದರ ನೇತೃತ್ವದಲ್ಲಿ ನಡೆಯುವ ಗೋಪೂಜಾ ಕಾರ್ಯಕ್ರಮದ ಸಮಿತಿಗೆ ನೂತನವಾಗಿ ಪದಾಧಿಕಾರಿಗಳ ಆಯ್ಕೆ ಸೆ 25 ರಂದು ಕಾವು ಶ್ರೀ ಪಂಚಲಿಗೇಶ್ವರ ದೇವಾಲಯದ ವಠಾರದಲ್ಲಿ ನಡೆಯಿತು.

ಭಾಸ್ಕರ ಬಲ್ಯಾಯ ಕಾವು
ನಹುಷಾ ಭಟ್ ಪಳನೀರು
ಹರೀಶ್ ಕುಂಜತ್ತಾಯ ಕಾವು
ಶಿವಕುಮಾರ್ ಕಾವು

ಸಮಿತಿಯ ಗೌರವಾಧ್ಯಕ್ಷರಾಗಿ ಭಾಸ್ಕರ ಬಲ್ಯಾಯ ಕಾವು,ಅಧ್ಯಕ್ಷರಾಗಿ ನಹುಷಾ ಭಟ್ ಪಳನೀರು, ಪ್ರಧಾನ ಕಾರ್ಯದರ್ಶಿಯಾಗಿ ಶಿವಕುಮಾರ್ ಕಾವು ಹಾಗೂ ಗೌರವ ಸಲಹೆಗಾರರಾಗಿ ನಿಕಟಪೂರ್ವ ಅಧ್ಯಕ್ಷ ಹರೀಶ್ ಕುಂಜತ್ತಾಯ ಇವರನ್ನು ಆಯ್ಕೆ ಗೊಳಿಸಲಾಯಿತು.

ಅ 30 ರಂದು 12ನೇ ವರ್ಷದ ಗೋಪೂಜಾ ಕಾರ್ಯಕ್ರಮ
12ನೇ ವರ್ಷದ ಗೋಪೂಜಾ ಕಾರ್ಯಕ್ರಮವನ್ನುಅ 30 ರಂದು ಕಾವು ಶ್ರೀ ಪಂಚಲಿಂಗೇಶ್ವರ ದೇವಾಲಯದ ವಠಾರದಲ್ಲಿ ನಡೆಸುವುದರ ಜೊತೆಗೆ ದಾರ್ಮಿಕ ಸಭಾ ಕಾರ್ಯಕ್ರಮ,ಭಜನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಸುವದರ ಬಗ್ಗೆ ಕಾರ್ಯಕ್ರಮದಲ್ಲಿ ನಿರ್ಣಯಿಸಲಾಯಿತು.

ಈ ಸಂದರ್ಭದಲ್ಲಿ ಕಾವು ಬಜರಂಗದಳದ ಘಟಕದ ಸಂಚಾಲಕ ಕಿರಣ್ ಕಾವು,ಪ್ರಮುಖರಾದ ನಾರಾಯಣ ಆಚಾರ್ಯ ಮಳಿ, ಧನಂಜಯ ನಾಯ್ಕ ಕುಂಞಕುಮೇರು,ಶ್ರೀಕಾಂತ್ ಕಾವು,ವೇಣುಗೋಪಾಲ್ ಮಾಣಿಯಡ್ಕ, ಪ್ರಜ್ವಲ್ ಕೆರೆಮಾರು, ಉಮೇಶ್ ಮಾಡನ್ನೂರು, ಹರೀಶ್ ಎ ಕೆ ಮಾಡನ್ನೂರು,ದೀಪಕ್ ಅಶ್ವತಡಿ ಸೇರಿದಂತೆ ವಿಶ್ವ ಹಿಂದೂ ಪರಿಷತ್ ಬಜರಂಗದಳ ಕಾರ್ಯಕರ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here