ಸೆ.30: ರಾಜ್ಯ ಗುಪ್ತ ವಾರ್ತೆ ಎಎಸೈ ಸುರೇಶ್‌ ರೈ ಸೇವಾ ನಿವೃತ್ತಿ

0

ಪುತ್ತೂರು : ರಾಜ್ಯ ಗುಪ್ತ ವಾರ್ತೆ ಮಂಗಳೂರು ಇಲ್ಲಿ ಎಎಸೈ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಸುರೇಶ್‌ ರೈ ಅವರು ಸೆ.30ರಂದು ಸೇವಾ ನಿವೃತ್ತಿ ಹೊಂದಲಿದ್ದಾರೆ. ಸುರೇಶ್‌ ರೈ ಅವರು ಪೊಲೀಸ್‌ ಇಲಾಖೆಯಲ್ಲಿ 33 ವರ್ಷ ಸೇವೆ ಸಲ್ಲಿಸಿದ್ದಾರೆ.

ಸುರೇಶ್‌ ರೈ ಅವರು 1989ರ ನವೆಂಬರ್‌ 6ರಂದು ಮಂಗಳೂರು ಸಂಚಾರ ಪೂರ್ವ ಠಾಣೆಯಲ್ಲಿ ಪಿಸಿಯಾಗಿ ವೃತ್ತಿ ಜೀವನ ಆರಂಭಿಸಿ, ಈ ಠಾಣೆಯಲ್ಲಿ 4.6 ವರ್ಷ ಸೇವೆ ಬಳಿಕ ಪುತ್ತೂರು ಎಎಸ್ಪಿ ಕಚೇರಿಯಲ್ಲಿ 17 ವರ್ಷ, ಮೆಸ್ಕಾಂ ವಿಜಿಲೆನ್ಸ್‌ ನಲ್ಲಿ 4.6 ವರ್ಷ ಸೇವೆ ಸಲ್ಲಿಸಿ 2016ರಲ್ಲಿ ಎಎಸೈ ಆಗಿ ಪದೋನ್ನತಿಗೊಂಡು ಸುಳ್ಯ ಪೊಲೀಸ್‌ ಠಾಣೆಯಲ್ಲಿ 1 ವರ್ಷ, ಪುತ್ತೂರು ಗ್ರಾಮಾಂತರ ಪೊಲೀಸ್‌ ಠಾಣೆ ಸಂಪ್ಯದಲ್ಲಿ 2 ವರ್ಷ, ಈಶ್ವರ ಮಂಗಲ ಪೊಲೀಸ್‌ ಹೊರಠಾಣೆಯಲ್ಲಿ 2 ವರ್ಷ ಸೇವೆ ಸಲ್ಲಿಸಿದ್ದಾರೆ.

ಪ್ರಸ್ತುತ 2 ವರ್ಷಗಳಿಂದ ಮಂಗಳೂರಿನ ರಾಜ್ಯ ಗುಪ್ತ ವಾರ್ತೆಯಲ್ಲಿ ಕರ್ತವ್ಯದಲ್ಲಿದ್ದಾರೆ.

ಸೆ.30 ರಂದು ಸೇವಾ ನಿವೃತ್ತಿಯಾಗಲಿರುವ ಇವರು 1962 ಸೆ.14ರಂದು ಬಂಟರ ಪ್ರತಿಷ್ಠಿತ ಮನೆತನವಾದ ವಿಟ್ಲಪಡ್ನೂರು ಗ್ರಾಮದ ಎರ್ಮೆನಿಲೆ ಮನೆತನದಲ್ಲಿ ಜನಿಸಿದರು. ಸುರೇಶ್ ರೈ ಮೂಲತಃ ವಿಟ್ಲದ ಕೊಲ್ಯ ನಿವಾಸಿ.

ಪ್ರಸ್ತುತ ಪುತ್ತೂರು ನೆಹರೂನಗರದ “ಇಬ್ಬನಿ” ಕಾರ್ಜಾಲಿನಲ್ಲಿ ಪತ್ನಿ ವನಜಾಕ್ಷಿ ರೈ, ಮಗಳು ಇನ್ಫೋಸಿಸ್‌ ಉದ್ಯೋಗಿ ಪರೀಕ್ಷಾ ರೈ ಅವರೊಂದಿಗೆ ನೆಲೆಸಿದ್ದಾರೆ.

LEAVE A REPLY

Please enter your comment!
Please enter your name here