ನಾಳೆ ಪುತ್ತೂರು ಉಮೇಶ್ ನಾಯಕ್ ಅವರ ಬಾರೆ ಸಖಿ ಹಾಡೋಣ ಆಲ್ಬಮ್ ಸಾಂಗ್ ಬಿಡುಗಡೆ

0

 

 

ಪುತ್ತೂರು: ಉದಯೋನ್ಮುಖ ಯುವ ಸಾಹಿತಿ, ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಅವರು ರಚಿಸಿದ ಪ್ರಣಯಗೀತೆ ಆಲ್ಬಮ್ ಸಾಂಗ್ ‘ಬಾರೆ ಸಖಿ ಹಾಡೋಣ’ ಸೆ.29ರಂದು ಬಿಡುಗಡೆಗೊಳ್ಳಲಿದೆ.‌
ಅಂಬಿಕಾ ವಿದ್ಯಾಲಯದಲ್ಲಿ ನಡೆಯುವ 21ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಡಾ. ಮಹೇಶ್ ಜೋಶಿ ಬಿಡುಗಡೆ ಮಾಡಲಿದ್ದಾರೆ. ರಾಗಸಂಯೋಜನೆ ಮಾಡಿ ಸಂಗೀತ ನೀಡಿರುವ ಪುತ್ತೂರು ನರಸಿಂಹ ನಾಯಕ್ ಗಾಯನ ಹೇಳಿದ್ದಾರೆ.‌ ಈಗಾಗಲೇ ಪುತ್ತೂರು ಉಮೇಶ್ ನಾಯಕ್ ಅವರು 2 ಕವನ ಸಂಕಲನ,3 ಭಕ್ತಿಗೀತೆ ಧ್ವನಿಸುರಳಿ, ಅಲ್ಲದೆ ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸ್ಥಳಪುರಾಣ ಸಂಗ್ರಹ ಸ್ವಯಂಭು ಮಾಲಿಂಗೇಶ್ವರ ಕೃತಿ ರಚಿಸಿದ್ದಾರೆ

LEAVE A REPLY

Please enter your comment!
Please enter your name here