ಸಾಲ್ಮರ ಬೈಕ್ ಅಪಘಾತದಿಂದ ಗಾಯಗೊಂಡು ರಸ್ತೆ ಬದಿ ಬಿದ್ದಿದ್ದ ಸವಾರನನ್ನು ಆಸ್ಪತ್ರೆಗೆ ದಾಖಲಿಸಿದ ಗಸ್ತು ನಿರತ ಪೊಲೀಸರು

0

ತೀವ್ರ ಗಾಯಗೊಂಡ ವೆಲ್ಡರ್ ನಿತಿನ್ ಮಂಗಳೂರು ಆಸ್ಪತ್ರೆಗೆ ದಾಖಲು

ಪುತ್ತೂರು: ಸಾಲ್ಮರ ಸಮೀಪ ಬೈಕ್ ಅಪಘಾತದಿಂದ ತೀವ್ರ ಗಾಯಗೊಂಡು ರಸ್ತೆ ಬದಿ ಬಿದಿದ್ದ ಸವಾರೊಬ್ಬರನ್ನು ಗಸ್ತು ನಿರತ ಪೊಲೀಸರು ಪುತ್ತೂರು ಆಸ್ಪತ್ರೆಗೆ ದಾಖಲಿಸಿದ ಘಟನೆ ಸೆ.29ರ ನಸುಕಿನ ಜಾವ ನಡೆದಿದೆ.

ಬೈಕ್ ಸವಾರ ಕೊಡಿಪ್ಪಾಡಿ ಗ್ರಾಮದ ಪಲ್ಲತ್ತಾರು ನಿವಾಸಿ ವೆಲ್ಡಿಂಗ್ ಕೆಲಸ ಮಾಡುತ್ತಿರುವ ನಿತಿನ್ ಎಂದು ಗುರುತಿಸಲಾಗಿದ್ದು, ಅವರ ಬೈಕ್ ಸಾಲ್ಮರ ಸಮೀಪ ಅಪಘಾತಗೊಂಡ ಸ್ಥಿತಿಯಲ್ಲಿ ಬಿದ್ದಿದ್ದು, ಪಕ್ಕದಲ್ಲಿ ಸವಾರ ನಿತಿನ್ ಅವರು ತೀವ್ರ ಗಾಯಗೊಂಡು ಅಸ್ವಸ್ಥಗೊಂಡಿದ್ದರು. ಇದನ್ನು ಗಮನಿಸಿದ ಗಸ್ತು ನಿರತ ಪೊಲೀಸರು ಬೈಕ್ ಸವಾರರ ನಿತಿನ್ ಅವರನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಿದ್ದರು. ತೀವ್ರ ಗಾಯಗೊಂಡ ನಿತಿನ್ ಅವರನ್ನು ಮಂಗಳೂರು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here