ಆಯುಧಪೂಜೆ ಪ್ರಯುಕ್ತ ಕ್ರಿಸ್ಟೋಫರ್ ಅಸೋಸಿಯೇಶನ್ ನೇತೃತ್ವದಲ್ಲಿ ಮಾಯಿದೆ ದೇವುಸ್ ಚರ್ಚ್ ವ್ತಾಪ್ತಿಯ ವಾಹನಗಳಿಗೆ ಆಶೀರ್ವಚನ

0

ಪುತ್ತೂರು: ಪುತ್ತೂರು ಮಾಯಿದೆ ದೇವುಸ್ ಚರ್ಚ್ ನ ಕ್ರಿಸ್ಟೋಫರ್ ಅಸೋಸಿಯೇಶನ್ ವತಿಯಿಂದ, ಚರ್ಚ್ ವ್ತಾಪ್ತಿಯ ವಾಹನಗಳಿಗೆ ಆಯುಧಪೂಜೆಯ ಪ್ರಯುಕ್ತ ಆಶೀರ್ವಚನ ಕಾರ್ಯಕ್ರಮ ಅ.01 ಹಾಗೂ 2 ರಂದು ಜರಗಿತು.


ಮಾಯಿದೆ ದೇವುಸ್ ಚರ್ಚ್ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್, ಸಹಾಯಕ ಧರ್ಮಗುರು ವಂ|ಕೆವಿನ್ ಲಾರೆನ್ಸ್ ಡಿ’ಸೋಜರವರು ವಾಹನಗಳ ಮೇಲೆ ಪವಿತ್ರಜಲ ಸಿಂಪಡಿಸಿ, ಸಂದೇಶ ನೀಡುತ್ತಾ, ಪ್ರಯಾಣಿಕರನ್ನು ಸುಗಮವಾಗಿ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಕೊಂಡೊಯ್ಯಲು ವಾಹನದ ಅವಶ್ಯಕತೆಯಿದೆ. ವಾಹನಗಳು ಮನುಷ್ಯನ ಜೀವನದ ಪಯಣದಲ್ಲಿ ಸಂಗಾತಿಯಾಗಿ ಪರಿಣಮಿಸಿದೆ. ವಾಹನ ಚಲಾಯಿಸುವಾಗ ವಾಹನ ಸವಾರರಲ್ಲಿ ಜಾಗರೂಕತೆ ಅತೀ ಅಗತ್ಯವಾಗಿ ಬೇಕಾಗಿದೆ ಎಂದು ಹೇಳಿ ಆಶೀರ್ವಚನ ನೀಡಿದರು.


ಕ್ರಿಸ್ಟೋಫರ್ ಅಸೋಸಿಯೇಶನ್ ಅಧ್ಯಕ್ಷ ಶರೂನ್ ಸಿಕ್ವೇರಾ, ಮಾಜಿ ಅಧ್ಯಕ್ಷರಾದ ವಲೇರಿಯನ್ ಡಾಯಸ್, ರೋಶನ್ ಡಾಯಸ್, ಕಾರ್ಯದರ್ಶಿ ಆಂಟನಿ ಒಲಿವೆರ್, ಸಮಿತಿ ಸದಸ್ಯರಾದ ಪಾವ್ಲ್ ಮೊಂತೇರೊ, ಶರೂನ್ ವಿಕ್ಟರ್ ಡಿ’ಸೋಜ ಸಹಿತ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ದಿನೇ ದಿನೇ ವಾಹನಗಳ ಸಂಖ್ಯೆ ಹೆಚ್ಚುತ್ತಿರುವ ಸಂದರ್ಭದಲ್ಲಿ ವಾಹನಗಳ ಪಾರ್ಕಿಂಗಿಗೆ ಜಾಗದ ಅನಾನುಕೂಲತೆ ಮನಗಂಡು ಚರ್ಚ್ ನಲ್ಲಿ ಶನಿವಾರ ಸಂಜೆ ಹಾಗೂ ಆದಿತ್ಯವಾರ ಬೆಳಗ್ಗೆ ನಡೆಯುವ ಪೂಜಾವಿಧಿಗಳ ಬಳಿಕ ವಾಹನಗಳಿಗೆ ಪವಿತ್ರಜಲ ಸಿಂಪಡಿಸುವ ಮೂಲಕ ಆಶೀರ್ವಚನ ಕಾರ್ಯ ನೆರವೇರಿತು.

LEAVE A REPLY

Please enter your comment!
Please enter your name here