ನಿಡ್ಪಳ್ಳಿ ಕಾರ್ಯಕ್ಷೇತ್ರದ ಸೇವಾ ಕೇಂದ್ರ ಉದ್ಘಾಟನೆ

0

ನಿಡ್ಪಳ್ಳಿ; ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ ಇದರ ನಿಡ್ಪಳ್ಳಿ ಕಾರ್ಯಕ್ಷೇತ್ರದ ಸೇವಾ ಕೇಂದ್ರ ಮತ್ತು ವಾರದ ಸುವಿಧಾ ಸಂಗ್ರಹ ಕೇಂದ್ರ ರೆಂಜ ಪಾರ ಕಟ್ಟಡದಲ್ಲಿ ಅ.2 ರಂದು ಉದ್ಘಾಟನೆ ಗೊಂಡಿತು.
  ನಿಡ್ಪಳ್ಳಿ ಒಕ್ಕೂಟದ ಅಧ್ಯಕ್ಷ ರಾಧಾಕೃಷ್ಣ ಪಾಟಾಳಿ ರಿಬ್ಬನ್ ಕತ್ತರಿಸಿ, ಬೆಟ್ಟಂಪಾಡಿ ವಲಯಾಧ್ಯಕ್ಷ ಬಾಲಕೃಷ್ಣ ಇವರು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.
  ವಲಯದ ನಿಕಟಪೂರ್ವ ಅಧ್ಯಕ್ಷ ನವೀನ ಕುಮಾರ್.ಎಂ ಶುಭ ಹಾರೈಸಿದರು. ವಲಯದ ಮೆಲ್ವೀಚಾರಕ ಶಿವಪ್ಪ. ಎನ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸೇವಾ ಪ್ರತಿನಿಧಿ ಜಗನ್ನಾಥ ಪಾಟಾಳಿ ವಂದಿಸಿದರು.
    ಸೇವಾ ಪ್ರತಿನಿಧಿಗಳಾದ ಶಾಲಿನಿ.ಕೆ, ಸುಮ.ಬಿ,ಪದ್ಮಾವತಿ. ಡಿ, ಬೆಟ್ಟಂಪಾಡಿ ಒಕ್ಕೂಟದ ಅಧ್ಯಕ್ಷ ಬಾಲಕೃಷ್ಣ ನಾಯ್ಕ, ಮಾಜಿ ಅಧ್ಯಕ್ಷ ರವಿನಾಥ ಕೋನಡ್ಕ,ವಿಪತ್ತು ನಿರ್ವಹಣಾ ಸಮಿತಿಯ ಸದಸ್ಯರಾದ ಹರಿಪ್ರಸಾದ್.ಸಿ.ಎಚ್, ಸುರೇಶ, ಸತೀಶ್. ಎಂ, ಹೇಮಾ ಸಿ.ಎಚ್, ಶ್ರೀಮತಿ ಮತ್ತೀತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here