ಎಸ್ಕೆಎಸ್ಸೆಸ್ಸೆಫ್ ಪಮ್ಮಲೆ ಯುನಿಟ್‌ನಿಂದ `ಬೈತುಲ್ ಖಿದ್ಮಾ’ಗೆ ಶಿಲಾನ್ಯಾಸ

0

ಪುತ್ತೂರು: ಅಶಕ್ತರಿಗೆ ಮನೆ ನಿರ್ಮಿಸಿಕೊಡುವುದು, ರೋಗಿಗಳ ಶುಶ್ರೂಷೆ, ಬಡವರಿಗೆ ಆಸರೆಯಾಗುವುದು ಇವೆಲ್ಲವೂ ಅಲ್ಲಾಹು ಇಷ್ಟಪಡುವ ಪುಣ್ಯಕಾರ್ಯವಾಗಿದೆ ಎಂದು ಸಯ್ಯದ್ ಫಝಲ್ ತಂಙಳ್ ಅಲ್ ಬುಖಾರಿ ಕುನ್ನುಂಗೈ ಹೇಳಿದರು.
ಎಸ್.ಕೆ.ಎಸ್.ಎಸ್.ಎಫ್ ಪಮ್ಮಲೆ ಯುನಿಟ್ ವತಿಯಿಂದ ಬಡ ಕುಟುಂಬವೊಂದಕ್ಕೆ ನಿರ್ಮಿಸಿ ಕೊಡಲು ಉದ್ದೇಶುಸಿರುವ ಮನೆಯ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು. ನಿರ್ಗತಿಕ ಕುಟುಂಬಗಳಿಗೆ ಆಸರೆಯಾಗುವ ಎಸ್.ಕೆ.ಎಸ್.ಎಸ್.ಎಫ್. ಪಮ್ಮಲೆ ಯುನಿಟ್‌ನ ಸಮಾಜಮುಖಿ ಕಾರ್ಯ ಶ್ಲಾಘನೀಯ ಎಂದು ಅವರು ಹೇಳಿದರು. ಎಸ್ಕೆಎಸ್ಸೆಸ್ಸೆಫ್ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here