ಆನೆಮಜಲು: ಹೆಜ್ಜೇನು ಕಡಿತ – ಚರ್ಚ್‌ಗೆ ಹೋಗುತ್ತಿದ್ದ ಇಬ್ಬರಿಗೆ ಗಾಯ

0

ಪುತ್ತೂರು: ಚರ್ಚ್‌ಗೆ ಹೋಗುತ್ತಿದ್ದ ಇಬ್ಬರಿಗೆ ಹೆಜ್ಜೇನು ಕಡಿತಗೊಂಡು ಆಸ್ಪತ್ರೆಯಲ್ಲಿ ದಾಖಲಾಗಿರುವ ಘಟನೆ ಅ.2ರಂದು ಬೆಳಿಗ್ಗೆ ಆನೆಮಜಲಿನಲ್ಲಿ ನಡೆದಿದೆ.
ಆನೆಮಜಲಿನ ನಿವಾಸಿ ಸಿಡಿಪಿಒ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ವಿಕಲಚೇತನ ರೋಶನ್ ಗೊನ್ಸಾಲಿಸ್ ಮತ್ತು ರಿಚರ್ಡ್ ಎಂಬವರು ಬೆಳಿಗ್ಗೆ ಚರ್ಚ್‌ಗೆ ಹೋಗುತ್ತಿದ್ದ ಸಂದರ್ಭದಲ್ಲಿ ಹೆಜ್ಜೇನು ಅವರ ಮೇಲೆ ದಾಳಿ ಮಾಡಿದೆ. ಈ ಸಂದರ್ಭ ಹೆಜ್ಜೇನು ಕಡಿತಕ್ಕೊಳಪಟ್ಟ ರೋಶನ್ ಗೋನ್ಸಾಲಿಸ್ ಮತ್ತು ರಿಚರ್ಡ್ ಅಸ್ವಸ್ಥಗೊಂಡು ಬಿದ್ದಿದ್ದು, ಸ್ಥಳೀಯರು ಅವರನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಿದ್ದಾರೆ. ರಿಚರ್ಡ್ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here