ನೆಲ್ಯಾಡಿ: ಮೆಸ್ಕಾಂ ಶಾಖಾ ಕಚೇರಿಯಲ್ಲಿ ಆಯುಧ ಪೂಜೆ

0

ನೆಲ್ಯಾಡಿ: ಮೆಸ್ಕಾಂ ನೆಲ್ಯಾಡಿ ಶಾಖಾ ಕಚೇರಿ ಹಾಗೂ ಮಾದೇರಿಯಲ್ಲಿರುವ ಸಬ್‌ಸ್ಟೇಷನ್‌ನಲ್ಲಿ ಅ.4ರಂದು ಆಯುಧ ಪೂಜೆ ನಡೆಯಿತು.

ಶಾಖಾ ಕಚೇರಿ ಹಾಗೂ ಸಬ್‌ಸ್ಟೇಷನ್‌ನಲ್ಲಿರುವ ಯಂತ್ರೋಪಕರಣಗೊಳಿಗೆ ಆಯುಧಪೂಜೆ ನೆರವೇರಿಸಲಾಯಿತು. ಜನಪ್ರತಿನಿಧಿಗಳು, ವಿವಿಧ ಕ್ಷೇತ್ರಗಳ ಗಣ್ಯರು, ಅಧಿಕಾರಿಗಳು ಆಗಮಿಸಿ ಶುಭಹಾರೈಸಿದರು. ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸಜಿಕುಮಾರ್, ನೆಲ್ಯಾಡಿ ಶಾಖಾ ಇಂಜಿನಿಯರ್ ರಮೇಶ್, ಆಲಂಕಾರು ಶಾಖಾ ಇಂಜಿನಿಯರ್ ಸೇರಿದಂತೆ ಮೆಸ್ಕಾಂ ನೆಲ್ಯಾಡಿ ಶಾಖಾ ಪವರ್‌ಮ್ಯಾನ್‌ಗಳು ಆಯುಧಪೂಜೆಯಲ್ಲಿ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here