ಕೆ.ಎಸ್ಆರ್.ಟಿ.ಸಿ ನಿವೃತ್ತ ಚಾಲಕ ವಸಂತ ಪೂಜಾರಿಯವರಿಗೆ ಸನ್ಮಾನ

0

ಪುತ್ತೂರು : ರಾಜ್ಯ ರಸ್ತೆ ಸಾರಿಗೆ ನಿಗಮ ಪುತ್ತೂರು ಘಟಕದಲ್ಲಿ ಬರೋಬ್ಬರಿ 36 ವರುಷಗಳಿಂದ ಚಾಲಕರಾಗಿ ಅಪಘಾತ ರಹಿತ ಸೇವೆ ಸಲ್ಲಿಸಿ, ನಿವೃತ್ತರಾದ ಹಿರಿಯ ಚಾಲಕ ನೆರಿಮೊಗರು ಕೈಪಂಗಳ ದೋಳ ನಿವಾಸಿ ಹೊನ್ನಪ್ಪ ಪೂಜಾರಿ, ಸೀತಮ್ಮ ಹೊನ್ನಪ್ಪ ದಂಪತಿ ಪುತ್ರ ವಸಂತ ಪೂಜಾರಿ ಕೆ ರವರಿಗೆ ಸನ್ಮಾನ ಕಾರ್ಯಕ್ರಮ ಪುತ್ತೂರು ಮುಕ್ರಂಪಾಡಿಯ ಕೆ ಎಸ್ ಆರ್ ಟಿ ಸಿ ಘಟಕದ ಅವರಣದಲ್ಲಿ ಅ.4 ರಂದು ನಡೆಯಿತು.

ವಿಭಾಗೀಯ ನಿಯಂತ್ರಣಾಧಿಕಾರಿ ಜಯಕರ ಶೆಟ್ಟಿಯವರು ವಸಂತ ಪೂಜಾರಿ, ಲೀಲಾವತಿ ವಸಂತ ದಂಪತಿಗೆ ಹಾರ ಹಾಕಿ, ಶಾಲು ಹೊದಿಸಿ, ಸ್ಮರಣಿಕೆ ನೀಡಿ ನಿಗಮದ ಎಲ್ಲಾ ಸಿಬ್ಬಂದಿಗಳ ಪರವಾಗಿ ಗೌರವಿಸಿ ವಂದಿಸಿದರು.

ಘಟಕ ವ್ಯವಸ್ಥಾಪಕ ಇಸ್ಮಾಯಿಲ್, ಆಡಳಿತಾಧಿಕಾರಿ ರೇವತಿ, ವಿಭಾಗೀಯ ತಾಂತ್ರಿಕ ಶಿಲ್ಪಿ ಆಶಾಲತಾ, ಪುತ್ರ ಮಂಗಳೂರು ಗ್ರಾಮಾಂತರ ಠಾಣಾ ಹೆಡ್ ಕಾನ್ಸ್ಟೇಬಲ್ ಲೋಹಿತ್, ಪವಿತ್ರ ಲೋಹಿತ್ ದಂಪತಿ ಹಾಗೂ ಬೇಬಿ ದ್ಯುತಿ ಲೋಹಿತ್, ಸಹೋದರರಾದ ರಾಜ್ಯ ರಸ್ತೆ ನಿಗಮದ ನಿವೃತ್ತ ಚಾಲಕ, ಚಿನ್ನದ ಪದಕ ವಿಜೇತ ಶ್ರೀಧರ ಪೂಜಾರಿ ಕೈಪಂಗಳ ದೋಳ, ದಿನೇಶ್ ಹಾಗೂ ಯಶೋಧ ದಿನೇಶ್ ಕೈಪಂಗಳ ದೋಳ ದಂಪತಿ ಮತ್ತು ತೃಷಾ ದಿನೇಶ್ ,ವೀಕ್ಷಾ ದಿನೇಶ್, ರಮೇಶ್ ಪೂಜಾರಿ ಹಾಗೂ ಸುನಂದ ರಮೇಶ್ ದಂಪತಿ ಕೈಪಂಗಳ ದೋಳ ಹಾಗೂ ಅಕ್ಷಯ್, ಶ್ರದ್ಧಾ, ಸುಜಯ್, ರಘಚಂದ್ರ ಪೂಜಾರಿ ಆನಾಜೆ, ಹಾರ್ದಿಕ್, ಸಾನ್ವಿ ಮತ್ತು ನಿಗಮದ ಎಲ್ಲಾ ವಿಭಾಗದ ಸಿಬ್ಬಂದಿಗಳು ಮತ್ತು ನಿವೃತ್ತ ನೌಕರರು ಹಾಗೂ ಕುಟುಂಬ ವರ್ಗದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here