ಕೊಯಿಲದ ಹಿರಿಯ ಕಾಂಗ್ರೆಸ್ ಕಾರ‍್ಯಕರ್ತ ಪುತ್ತುಮೋನು ನಿಧನ

0

ಉಪ್ಪಿನಂಗಡಿ: ಕೊಯಿಲ ಗ್ರಾಮದ ಬಡ್ಡಮೆ ಶಕ್ತಿನಗರ ನಿವಾಸಿ, ಕಾಂಗ್ರೆಸ್ ಪಕ್ಷದ ಹಿರಿಯ, ಸಕ್ರಿಯ ಕಾರ‍್ಯಕರ್ತರಾಗಿದ್ದ ಅಬೂಬಕ್ಕರ್ ಯಾ ಪುತ್ತುಮೋನು (62 ವ.) ಮಂಗಳೂರು ಆಸ್ಪತ್ರೆಯಲ್ಲಿ ನಿಧನ ಹೊಂದಿದರು.

ಪುತ್ತುಮೋನುರವರಿಗೆ ಅ. 6ರಂದು ಸಂಜೆ ಮೆದುಳಿನಲ್ಲಿ ರಕ್ತಸ್ರಾವ ಉಂಟಾಗಿ, ಪುತ್ತೂರು ಆಸ್ಪತ್ರೆಗೆ ಕರೆದೊಯ್ದು, ಬಳಿಕ ಅಲ್ಲಿಂದ ಮಂಗಳೂರು ಕೆ.ಎಂ.ಸಿ.ಯಲ್ಲಿ ದಾಖಲಿಸಲಾಗಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದ ಅವರು ಅ. 7ರಂದು ಮಧ್ಯಾಹ್ನ ನಿಧನ ಹೊಂದಿದರು. ಪುತ್ತುಮೋನು ಎಂದೇ ಚಿರಪರಿಚಿತರಾಗಿರುವ ಇವರು ನೀರುಳ್ಳಿ ಮತ್ತು ಮೆಣಸು ಲೈನ್‌ಸೇಲ್ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದರು. ಕಾಂಗ್ರೆಸ್ ಸಮಿತಿಯ ಕೊಯಿಲ ಗ್ರಾಮದ 1ನೇ ವಾರ್ಡು ಬೂತ್ ಅಧ್ಯಕ್ಷರಾಗಿದ್ದ ಇವರು ಪಕ್ಷದಲ್ಲಿ ಸಕ್ರಿಯವಾಗಿ ತನ್ನನ್ನು ತೊಡಗಿಸಿಕೊಂಡು ಚಿರಪರಿಚಿತರಾಗಿದ್ದರು.

ಮೃತ ಪುತ್ತುಮೋನುರವರು ಪತ್ನಿ, 9 ಹೆಣ್ಣು, 2 ಗಂಡು ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here