ನೀರಾಜೆ ಮದ್ರಸದಲ್ಲಿ ಈದ್-ಮಿಲಾದ್ ಆಚರಣೆ

0

ಉಪ್ಪಿನಂಗಡಿ: ಪೈಗಂಬರ್ ಮುಹಮ್ಮದ್ ಮುಸ್ತಫಾ ನೆಬಿಯವರ ಜನ್ಮದ ಈದ್-ಮಿಲಾದ್ ಆಚರಣೆ ನೀರಾಜೆ ನೂರುಲ್ ಹುದಾ ಮದ್ರಸದಲ್ಲಿ ಅ. 9ರಂದು ನಡೆಸಲಾಯಿತು.
ಮದ್ರಸದ ಅಧ್ಯಕ್ಷ ಎನ್.ಕೆ. ನಝೀರ್ ಅಧ್ಯಕ್ಷತೆ ವಹಿಸಿ ಧ್ವಜಾರೋಹಣ ನೆರವೇರಿಸಿದರು. ಮದ್ರಸದ ಸದರ್ ಮುಅಲ್ಲಿಂ ಎಂ.ಕೆ. ಅಶ್ರಫ್ ಮುಸ್ಲಿಯಾರ್, ಗಂಡಿಬಾಗಿಲು ಮಸೀದಿ ಖತೀಬ್ ಅಬ್ದುಲ್ ಹಮೀದ್ ಶೌಕತ್ ಅಲಿ ಫೈಝಿ ನೆಬಿ ದಿನದ ಮಹತ್ವದ ಬಗ್ಗೆ ಮಾತನಾಡಿದರು.
ಸಮಾರಂಭದಲ್ಲಿ ಮದ್ರಸದ ಸದರ್ ಅಬ್ದುಲ್ಲ ಮುಸ್ಲಿಯಾರ್, ಗಂಡಿಬಾಗಿಲು ಮಸೀದಿ ಸದರ್ ಮುಅಲ್ಲಿಂ ಅಬ್ದುಲ್ ರಹಿಮಾನ್ ಫೈಝಿ, ಯೂಸುಫ್ ಅಲ್ ಖಾಸಿಮಿ, ಇಬ್ರಾಹಿಂ ಮುಸ್ಲಿಯಾರ್, ಗಂಡಿಬಾಗಿಲು ಮಸೀದಿ ಅಧ್ಯಕ್ಷ ಆದಂ ಹಾಜಿ, ಪದಾಧಿಕಾರಿಗಳಾದ ಜಿ. ಮಹಮ್ಮದ್ ರಫೀಕ್, ಹಸೈನಾರ್ ಹಾಜಿ, ಅಬ್ದುಲ್ ರಜಾಕ್ ಮರ್‍ವೇಲ್, ಜಿ. ಅಬ್ದುಲ್ ರಜಾಕ್, ನಝೀರ್ ಪೂರಿಂಗ, ನೀರಾಜೆ ಮದ್ರಸ ಸಮಿತಿ ಪದಾಧಿಕಾರಿಗಳಾದ ಸಿದ್ದಿಕ್ ಎನ್., ಶರೀಫ್ ನೀರಾಜೆ, ಇಬ್ರಾಹಿಂ ಮೋನು, ಪುತ್ತುಕುಂಞ, ರಜಾಕ್ ಜನಪ್ರಿಯ, ಇಸ್ಮಾಯಿಲ್ ಪಾಲೆತ್ತಡಿ, ಸಿದ್ದಿಕ್ ಕೊಲ, ಮಾಜಿ ಅಧ್ಯಕ್ಷರುಗಳಾದ ಪೊಡಿಕುಂಞ ನೀರಾಜೆ, ಆದಂ ಕುಂಞ, ಈಸುಬು, ಅಶ್ರಫ್ ಪಾಲೆತ್ತಡಿ, ಅಝೀಜ್ ಪಾಲೆತ್ತಡಿ ಮತ್ತಿತರರುಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here