ನೆಲ್ಯಾಡಿ ಬದ್ರಿಯಾ ಜುಮಾ ಮಸ್ಜಿದ್‌ನಲ್ಲಿ ಈದ್‌ಮಿಲಾದ್ ಆಚರಣೆ

0

ನೆಲ್ಯಾಡಿ: ಇಲ್ಲಿನ ಬದ್ರಿಯಾ ಜುಮಾ ಮಸ್ಜಿದ್ ವತಿಯಿಂದ ಪ್ರವಾದಿ ಮಹಮ್ಮದ್(ಸ.ಅ)ರವರ ಜನ್ಮದಿನಾಚರಣೆ, ಈದ್ ಮಿಲಾದ್ ಕಾರ್ಯಕ್ರಮವನ್ನು ಸಂಭ್ರಮದಿಂದ ಆಚರಿಸಿದರು.


ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ, ಈದ್‌ಮಿಲಾದ್ ರ್‍ಯಾಲಿ ನಡೆಯಿತು. ನೆಲ್ಯಾಡಿ ಬದ್ರಿಯಾ ಜುಮಾ ಮಸ್ಜಿದ್‌ನ ಅಧ್ಯಕ್ಷ ಸಿ.ಕೆ.ಅಬ್ದುಲ್ ರಹಿಮಾನ್, ಮಸ್ಜಿದ್ ಖತೀಬ್ ಶೌಕತ್ ಅಲಿ ಅಮಾನಿ, ಹೆಚ್.ಐ.ಎಂ.ಮದ್ರಸ ಮುಖ್ಯಗುರು ಉಸ್ಮಾನ್ ಸಖಾಫಿ, ಹೊಸಮಜಲು ಬಿಲಾಲ್ ಜುಮ್ಮಾ ಮಸ್ಜಿದ್ ಅಧ್ಯಕ್ಷ ಪಿ.ಎ.ಕೆ.ಅಬ್ದುಲ್ ರಹಿಮಾನ್, ಹೊಸಮಜಲು ಖತೀಬ್ ಉಮ್ಮರ್ ಮುಸ್ಲಿಯಾರ್, ಉಳಿತೊಟ್ಟು ಬಿಲಾಲ್ ಜುಮ್ಮಾ ಮಸ್ಜಿದ್ ಅಧ್ಯಕ್ಷ ಉಮ್ಮರ್ ಉಳಿತೊಟ್ಟು, ಉಳಿತೊಟ್ಟು ಖತೀಬ್ ಅಬೂಬಕ್ಕರ್ ಝುಹರಿ, ಪಟ್ಟೆ ಮುಸ್ತಾಫಾ, ಎಸ್.ಎಂ. ಇಸ್ಮಾಯಿಲ್, ಅಂಸೀಫ್ ಸಅದಿ, ಝುಬೈರ್ ಸಖಾಫಿ, ನಾಜಿಮ್ ಸಾಹೇಬ್, ನಝಿರ್ ಮೊರಂಕಳ, ನೌಫಲ್ ಸಾಗರ್, ಬಿಜೆಎಂ ಮಾಜಿ ಅಧ್ಯಕ್ಷರಾದ ಸುಲೈಮಾನ್ ಎನ್.ಎಸ್., ಉಮ್ಮರ್ ತಾಜ್, ಮಹಮ್ಮದ್ ಹನೀಫ್ (ಸಿಟಿ ), ರಫೀಕ್ ಸೀಗಲ್, ಅಯ್ಯುಬ್ ಮುಸ್ಲಿಯಾರ್, ನಿಯಾಜ್ ಸಾಹೇಬ್, ಅಶ್ರಫ್ ಶಕ್ತಿ ಹಾಗೂ ಮುಸ್ಲಿಂ ಬಾಂಧವರು ಭಾಗವಹಿಸಿದ್ದರು. ಮಾಜಿ ಅಧ್ಯಕ್ಷ ಅಡ್ವೋಕೇಟ್ ಇಸ್ಮಾಯಿಲ್‌ರವರು ಸ್ವಾಗತಿಸಿ, ಬಿಜೆಎಂ ಪ್ರಧಾನ ಕಾರ್ಯದರ್ಶಿ ಹನೀಫ್ ಬೈಲ್ ವಂದಿಸಿದರು.

LEAVE A REPLY

Please enter your comment!
Please enter your name here