ಕುಂಬ್ರ: ನೂತನ ಮದ್ರಸ ಕಟ್ಟಡ ನಿರ್ಮಾಣಕ್ಕೆ ಚಾಲನೆ

0

ಪುತ್ತೂರು: ಕುಂಬ್ರ ಬದ್ರಿಯಾ ನಗರ ಬದ್ರಿಯಾ ಜುಮಾ ಮಸೀದಿ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಲ್ ಮದ್ರಸತ್ತುಲ್ ಬದ್ರಿಯಾ ಇದರ ನೂತನ ಕಟ್ಟಡ ನಿರ್ಮಾಣ ಮಾಡುವ ಕಾರ್ಯಕ್ಕೆ ಈದ್ ಮಿಲಾದ್ ದಿನದಂದು ಜಮಾಅತರು ಚಾಲನೆ ನೀಡಿದರು.

ಮಾಜಿ ಅಧ್ಯಕ್ಷರುಗಳಾ ಮೂಸಾ ಮುಸ್ಲಿಯಾರ್ ಮತ್ತು ಯೂಸುಫ್ ಕಡ್ತಿಮಾರ್ ರವರು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಜಮಾತ್ ಮಾಜಿ ಕಾರ್ಯದರ್ಶಿ ಅರಬಿಕುಂಷಿ ಮಗಿರೆ, ಇಸ್ಮಾಯಿಲ್ ಕೋಳಿಗದ್ದೆ, ಜಮಾತ್ ಅಧ್ಯಕ್ಷರಾದ ಉಸ್ಮಾನ್ ಮುಸ್ಲಿಯಾರ್ ಶಾಂತಿನಡಿ, ಜೊತೆ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಕೊಯಿಲ, ಹಸೈನಾರ್ ಕೋಳಿಗದ್ದೆ, ಪಳ್ಳಿಕುಂಞಿ ಕಡ್ತಿಮಾರ್, ಮಾಜಿ ಕಾರ್ಯದರ್ಶಿ ಮಹಮ್ಮದ್ ಮಗಿರೆ, ಜಮಾತರಾದ ಶರೀಫ್ ಕುಯ್ಯಾರ್, ಇಬ್ರಾಹಿಂ ಕೊಯಿಲ, ಸವಾದ್ ಬದ್ರಿಯಾ ನಗರ, ರಫೀಕ್ ಕಡ್ತಿಮಾರ್, ಅಲ್ ಬದ್ರಿಯಾ ಯಂಗ್ ಮೆನ್ಸ್ ಅಧ್ಯಕ್ಷ ಆಸಿಫ್ ಕಡ್ತಿಮಾರ್, ಕಾರ್ಯದರ್ಶಿ ಸಾದಿಕ್ ಮಗಿರೆ, ಅನ್ವರ್ ಮಗಿರೆ, ಫಾರೂಕ್ ಮಗಿರೆ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.

ಖತೀಬರಾದ ಅಝೀಝ್ ಸಅದಿ ಮತ್ತು ಮುಅಲ್ಲಿಂ ಸಿದ್ದಿಕ್ ಸಅದಿ , ಹಿಶಾಮಿ ದುವಾ ನೆರವೇರಿಸಿದರು.

LEAVE A REPLY

Please enter your comment!
Please enter your name here