ಎಪ್ಪತ್ತು ಸಾವಿರ ರೂಪಾಯಿವರೆಗಿನ ಲಾಭ ಪಡೆಯಿರಿ…! ದೀಪಾವಳಿಯನ್ನು ಅದ್ಧೂರಿ ರೀತಿಯಲ್ಲಿ ಆಚರಿಸಿರಿ…

0

ಪುತ್ತೂರು : ಬೆಳಕಿನ ಹಬ್ಬ ದೀಪಾವಳಿಯನ್ನು ಅದ್ಧೂರಿಯಾಗಿ ಆಚರಣೆ ಮಾಡಲು, ಮಾರುತಿ ಸುಝಕಿ ಇಂಡಿಯಾ ತನ್ನೆಲ್ಲಾ ಮಾದರಿಯ ಕಾರಿನಲ್ಲೂ ಭರಪೂರ ಉಳಿತಾಯದ ಕೊಡುಗೆಗಳನ್ನು ಘೋಷಣೆ ಮಾಡೋ ಮೂಲಕ ಕಾರು ಪ್ರಿಯರ ಆಸಕ್ತಿಯನ್ನು ಮತ್ತಷ್ಟೂ ಹೆಚ್ಚಿಸಿದೆ. ಮಾರುತಿ ಕಾರುಗಳ ಖರೀದಿ ಮೂಲಕ ಬರೋಬ್ಬರಿ 70 ಸಾವಿರ ರೂಪೈಗಳ ಬೃಹತ್ ಉಳಿತಾಯದ ಜೊತೆ ಫೈನಾನ್ಸ್ ಸೌಲಭ್ಯ ಹಾಗೂ ಹಳೇ ಮಾದರಿ ಕಾರಿನ ವಿನಿಮಯಕ್ಕೂ ಅವಕಾಶ ತೆರೆದುಕೊಂಡಿದೆ. ಇದಕ್ಕಾಗಿಯೇ ಭಾರತ್ ಅಟೋ ಕಾರ್ಸ್ ಸಹಭಾಗಿತ್ವದಲ್ಲಿ ಮುಕ್ರಂಪಾಡಿ ಸುಭದ್ರ ಸಭಾ ಮಂದಿರ ಮುಂಭಾಗ 2 ದಿನದ ಬೃಹತ್ ಗ್ರಾಮೀಣ ಮಹೋತ್ಸವವನ್ನೂ ಆಯೋಜಿಸಿದ್ದು, ಕಾರು ಪ್ರಿಯರು ಅವಕಾಶ ಪಡೆದುಕೊಳ್ಳಬಹುದು. ಅ.10 ಮಹೋತ್ಸವ ಆರಂಭವಾಗಿದ್ದು, ಇಂಡಸ್ ಇಂಡ್ ಸಂಸ್ಥೆ ಉದ್ಯೋಗಿ ರಾಕೇಶ್ ದೀಪ ಬೆಳಗಿಸುವ ಮೂಲಕ ಮಹೋತ್ಸವವನ್ನು ಉದ್ಘಾಟಿಸಿದರು. ಭಾರತ್ ಸಂಸ್ಥೆಯ ಸಿಬ್ಬಂದಿಗಳಾದ ಪದ್ಮನಾಭ, ವಿಘ್ನೇಶ್, ಟ್ರೂ ವ್ಯಾಲ್ಯೂ ವಿಭಾಗದ ಕಿರಣ್ ಪ್ರಭು, ಅನೂಪ್ ಹಾಗೂ ಯೊಗೀಶ್ ಹಾಜರಿದ್ದರು. ಅ.11 ಸಂಜೆ ಮಹೋತ್ಸವ ತೆರೆ ಕಾಣಲಿದೆ.

ವಿವಿಧ ಮಾದರಿ ಕಾರುಗಳಲ್ಲೂ ಅಚ್ಚರಿ ಉಳಿತಾಯವನ್ನು ಸಂಸ್ಥೆ ನೀಡಿದ್ದು, ಆ ಮೂಲಕ 70 ಸಾವಿರ ರೂ.ವರೆಗಿನ ಲಾಭ ಪಡೆಯಬಹುದು. ಇಂದು ಸಂಜೆ ಮಹೋತ್ಸವ ಕೊನೆಗೊಳ್ಳಲಿದೆ. ವಿವರಗಳಿಗಾಗಿ -8095555230 /8277495730 ಸಂಪರ್ಕಿಸಬಹುದು.

LEAVE A REPLY

Please enter your comment!
Please enter your name here