₹ 70 ಸಾವಿರವರೆಗಿನ ಲಾಭ ಬೆಳಕಿನ ಹಬ್ಬಕ್ಕೆ…! ಆಲಂಕಾರಿನಲ್ಲಿ ಮಾರುತಿ ಗ್ರಾಮೀಣ ಮಹೋತ್ಸವಕ್ಕೆ ಚಾಲನೆ

0

ಪುತ್ತೂರು : ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ಮಾರುತಿ ಸುಝಕಿ ತನ್ನೆಲ್ಲಾ ಮಾದರಿಯ ಕಾರಿನಲ್ಲೂ ಭರಪೂರ ಉಳಿತಾಯದ ಕೊಡುಗೆಗಳನ್ನು ಘೋಷಣೆ ಮಾಡುವ ಮೂಲಕ ಕಾರು ಪ್ರಿಯರಲ್ಲಿ ಮತ್ತಷ್ಟು ಆಸಕ್ತಿಯನ್ನು ಮೂಡಿಸಿದೆ. ಬರೋಬ್ಬರಿ 70 ಸಾವಿರ ರೂಪಾಯಿಗಳ ಬೃಹತ್ ಉಳಿತಾಯದ ಜೊತೆ ಫೈನಾನ್ಸ್ ಸೌಲಭ್ಯ ಹಾಗೂ ಕಾರು ವಿನಿಮಯಕ್ಕೂ ಅವಕಾಶ ತೆರೆದುಕೊಂಡಿದೆ.

ಅಧಿಕೃತ ಮಾರಾಟ, ಸೇವಾ ಸಂಸ್ಥೆ ಭಾರತ್ ಅಟೋ ಕಾರ್ಸ್ ಸಹಭಾಗಿತ್ವದಲ್ಲಿ ಆಲಂಕಾರು ಎಂ ಆರ್ ಪಿ ಎಲ್ ಮುಂಭಾಗ ಅ.11, 12 ರಂದು ಎರಡು ದಿನದ ಬೃಹತ್ ಗ್ರಾಮೀಣ ಮಹೋತ್ಸವ ಅಯೋಜಿಸಿದ್ದು ಅ.11 ಚಾಲನೆ ನೀಡಲಾಯಿತು.

ಕೆನರಾ ಬ್ಯಾಂಕ್ ಮ್ಯಾನೇಜರ್ ಓಂ ಪ್ರಕಾಶ್ ದೀಪ ಪ್ರಜ್ವಲನೆ ನೆರವೇರಿಸೋ ಮೂಲಕ ಗ್ರಾಮೀಣ ಮಹೋತ್ಸವಕ್ಕೆ ಶುಭ ಹಾರೈಸಿದರು. ಭಾರತ್ ಸಂಸ್ಥೆ ಉದ್ಯೋಗಿಗಳು ಉಪಸ್ಥಿತರಿದ್ದರು . ಅ.11( ಇಂದು) ಮಹೋತ್ಸವ ಆರಂಭವಾಗಿ ಅ.12 ರ ಸಂಜೆ ವೇಳೆ ಮಹೋತ್ಸವ ತೆರೆ ಕಾಣಲಿದ್ದು ಗ್ರಾಹಕರು ಕಾರು ಖರೀದಿಸೋ ಮೂಲಕ ಅಚ್ಚರಿ ಕೊಡುಗೆಗಳ ಲಾಭವನ್ನೂ ಪಡೆದು ಕೊಳ್ಳುವಂತೆ ಟೀಂ ಲೀಡರ್ ಲಕ್ಮೀಶ ಪೂಂಜ ತಿಳಿಸಿ ವಂದಿಸಿದರು.

ವಿವಿಧ ಮಾದರಿ ಕಾರುಗಳಲ್ಲೂ ಅಚ್ಚರಿ ಉಳಿತಾಯವನ್ನು ಸಂಸ್ಥೆ ನೀಡಿದ್ದು ಆ ಮೂಲಕ ₹ 70 ಸಾವಿರ ರೂಪಾಯಿವರೆಗಿನ ಉಳಿತಾಯವನ್ನು ಮಾಡಬಹುದು. ವಿವರಗಳಿಗಾಗಿ -8197120030/ 9449043030 ಸಂಪರ್ಕಿಸಿ.

LEAVE A REPLY

Please enter your comment!
Please enter your name here