ಟಿ.ವಿ.9 ನ್ಯೂಸ್ ಚಾನೆಲ್ ದ.ಕ. ಜಿಲ್ಲಾ ವರದಿಗಾರರಾಗಿ ಅಶೋಕ್ ಪೂಜಾರಿ ಕರ್ತವ್ಯಕ್ಕೆ ಹಾಜರ್

0

ಪುತ್ತೂರು: ಟಿವಿ 9 ನ್ಯೂಸ್ ಚಾನೆಲ್ ದ.ಕ. ಜಿಲ್ಲಾ ವರದಿಗಾರರಾಗಿ ಆಶೋಕ್ ಪೂಜಾರಿ ನೇಮಕಗೊಂಡಿದ್ದಾರೆ.


ಪುತ್ತೂರು ವಿವೇಕಾನಂದ ಪದವಿ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದ ಬಳಿಕ ಸುದ್ದಿ ಬಿಡುಗಡೆ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭಿಸಿದ್ದ ಅಶೋಕ್ ಪೂಜಾರಿ ಬಳಿಕ ಪ್ರಜಾ ಟಿ.ವಿ.ಯಲ್ಲಿ ಉಡುಪಿ ಜಿಲ್ಲಾ ವರದಿಗಾರನಾಗಿ ಒಂದು ವರ್ಷ ಏಳು ತಿಂಗಳು ಕರ್ತವ್ಯ ನಿರ್ವಹಿಸಿದ್ದರು.‌ ನಂತರ ದಿಗ್ವಿಜಯ ನ್ಯೂಸ್ ಚಾನೆಲಿನಲ್ಲಿ ಆರು ವರ್ಷ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ವರದಿಗಾರನಾಗಿ ಕರ್ತವ್ಯ‌ ನಿರ್ವಹಿಸಿದ ಇವರು ಇದೀಗ ಟಿ.ವಿ 9 ನ್ಯೂಸ್ ಚಾನೆಲ್‌ ಕನ್ನಡ ಸಂಸ್ಥೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ವರದಿಗಾರನಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಇವರು ಚಿಕ್ಕಮುಡ್ನೂರು ಗ್ರಾಮದ ಬಡಾವು ನಿವಾಸಿ ಮೋನಪ್ಪ ಪೂಜಾರಿ‌ ಮತ್ತು ಕಮಲರವರ ಪುತ್ರ.

LEAVE A REPLY

Please enter your comment!
Please enter your name here