ಕೊಯಿಲ: ಒಕ್ಕಲಿಗ ಗೌಡ ಮಹಿಳಾ ಸಮಿತಿ ರಚನೆ

0

ರಾಮಕುಂಜ: ಕೊಯಿಲ ಗ್ರಾಮದ ಒಕ್ಕಲಿಗ ಗೌಡ ಮಹಿಳಾ ಸಮಿತಿಯನ್ನು ಅ.16ರಂದು ಆತೂರು ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನದ ವಠಾರದಲ್ಲಿ ನಡೆದ ಸಭೆಯಲ್ಲಿ ರಚನೆ ಮಾಡಲಾಯಿತು.

ಸಮಿತಿ ಗೌರವಾಧ್ಯಕ್ಷರಾಗಿ ತಾ.ಪಂ.ಮಾಜಿ ಸದಸ್ಯೆ ಜಯಂತಿ ಆರ್.ಗೌಡ, ಅಧ್ಯಕ್ಷರಾಗಿ ವೇದಾವತಿ ಸಬಳೂರು, ಪ್ರಧಾನ ಕಾರ್ಯದರ್ಶಿಯಾಗಿ ದಿವ್ಯಾಚೇತನ್ ಆನೆಗುಂಡಿಯವರು ಆಯ್ಕೆಯಾದರು. ಸಮಿತಿಗೆ ಇತರೇ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಹಿರಿಯರಾದ ಕಡೆ೦ಬ್ಯಾಲು ಲಿಂಗಪ್ಪ ಗೌಡರವರು ಸಭೆಯ ಅಧ್ಯಕ್ಷತೆ ವಹಿಸಿ ಮತನಾಡಿ, ಒಗ್ಗಟ್ಟಿನಿಂದ ಸಮಾಜದ ಏಳಿಗೆಗಾಗಿ ಸಮಾಜಬಾಂಧವರು ಶ್ರಮಿಸಬೇಕೆಂದು ಕರೆ ನೀಡಿದರು. ಆತೂರು ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಯದುಶ್ರೀ ಆನೆಗುಂಡಿಯವರು ಸಂಘಟನೆಯ ಬಲವರ್ಧನೆ ಕುರಿತು ಮಾಹಿತಿ ನೀಡಿದರು. ಆಲಂಕಾರು ವಲಯ ಮಹಿಳಾ ಸಮಿತಿಯ ಕಾರ್ಯದರ್ಶಿ ದೀಪಾ ಎಸ್.ಟಿ., ಒಕ್ಕಲಿಗ ಗೌಡ ಕೊಯಿಲ ಗ್ರಾಮ ಯುವ ಸಮಿತಿಯ ಅಧ್ಯಕ್ಷ ತಿಮ್ಮಪ್ಪ ಗೌಡ ಸಂಕೇಶ, ಕ್ರೀಡಾ ಸಮಿತಿಯ ಅಧ್ಯಕ್ಷ ವಿನೋದರ ಮಾಳ, ಕಾರ್ಯದರ್ಶಿ ಸುಧೀಶ್ ಪಟ್ಟೆ, ಸುಂದರ ಗೌಡ ಪರ೦ಗಾಜೆ ಸಂದರ್ಭೋಚಿತವಾಗಿ ಮಾತನಾಡಿದರು.

ಒಕ್ಕಲಿಗ ಗೌಡ ಸೇವಾ ಸಂಘದ ಕೊಯಿಲ ಗ್ರಾಮದ ಹಿರಿಯ ಸಮಿತಿ ಅಧ್ಯಕ್ಷ, ನಿವೃತ್ತ ಪ್ರಾಂಶುಪಾಲರೂ ಆದ ಭವಾನಿಶಂಕರ ಗೌಡ ಪರ೦ಗಾಜೆಯವರು ಸ್ವಾಗತಿಸಿ, ಮಹಿಳಾ ಸಂಘ ರಚನೆಯ ಉದ್ದೇಶ, ಸಂಘದ ಅವಶ್ಯಕತೆಯ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಯುವ ಸಮಿತಿಯ ಅಧ್ಯಕ್ಷ ತಿಮ್ಮಪ್ಪ ಗೌಡ ಸಂಕೇಶರವರು ಆಲಂಕಾರು ವಲಯ ಕ್ರೀಡೋತ್ಸವಕ್ಕೆ ಸಹಕಾರ ಕೋರಿದರು. ಕ್ರೀಡಾ ಸಮಿತಿಯ ಕಾರ್ಯದರ್ಶಿ ಸುಧೀಶ್ ಪಟ್ಟೆ ಕ್ರೀಡೋತ್ಸವದ ಮಾಹಿತಿಯನ್ನು ನೀಡಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here