ಮೊಟ್ಟೆತ್ತಡ್ಕ: ಸಿ.ಎ ಗೋವಿಂದ ಭಂಡಾರಿ ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನ

0

ಪುತ್ತೂರು:ಮೊಟ್ಟೆತ್ತಡ್ಕ ದಿ.ಅನಂತ ಭಂಡಾರಿ ಬಿ ಹಾಗೂ ಗೀತಾ ಭಂಡಾರಿ ಬಿ.ರವರ ಪುತ್ರ, ಬೆಂಗಳೂರಿನಲ್ಲಿ ಚಾರ್ಟರ್ಡ್ ಎಕೌಂಟೆಂಟ್ ಆಗಿದ್ದ ಗೋವಿಂದ ಭಂಡಾರಿ ಬಿ(45ವ)ರವರು ಹೃದಯಾಘಾತದಿಂದ ಅ.21 ರಂದು ನಿಧನ ಹೊಂದಿದ್ದಾರೆ.

ಮೃತ ಗೋವಿಂದ ಭಂಡಾರಿರವರು ಸಂತ ಫಿಲೋಮಿನಾ ಕಾಲೇಜಿನಲ್ಲಿ 1998ರಲ್ಲಿ ಬಿಕಾಂ ವ್ಯಾಸಂಗ ಮಾಡುತ್ತಿದ್ದ ಸಂದರ್ಭದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಿಂದ ಮೂರನೇ ರ‍್ಯಾಂಕ್ ಗಳಿಸಿದ್ದರು. ಬಳಿಕ ಚಾರ್ಟರ್ಡ್ ಎಕೌಂಟೆಂಟ್ ಪರೀಕ್ಷೆ ಬರೆದು ಕಳೆದ 12 ವರ್ಷಗಳಿಂದ ಬೆಂಗಳೂರಿನ ನಂದಿನಿ ಲೇಔಟ್ ನಲ್ಲಿ ಪ್ರ್ಯಾಕ್ಟೀಸ್ ನಡೆಸುತ್ತಿದ್ದರು. ಮೃತರು ತಾಯಿ ಗೀತಾ ಭಂಡಾರಿ, ಪತ್ನಿ ಮಮತಾ ಬಿ, ಪುತ್ರ ದಕ್ಷ ಬಿ, ಸಹೋದರ ಗಣಪತಿ ಭಂಡಾರಿ ಬಿ, ಸಹೋದರಿ ಪದ್ಮಿನಿ ಬಿ.ರವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here