ಆರ್ಲಪದವು: ರಣಮಂಗಲ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಜಾತ್ರೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

0

ಆರ್ಲಪದವು: ಪಾಣಾಜೆ ಗ್ರಾಮದ ರಣಮಂಗಲ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಹಾಗೂ ಪೂಮಾಣಿ – ಕಿನ್ನಿಮಾಣಿ,‌ಪಿಲಿಭೂತ ದೈವಸ್ಥಾನದ ಜಾತ್ರೋತ್ಸವವು ಬರುವ ಜ.22 ರಿಂದ 28  ರವರೆಗೆ ನಡೆಯಲಿದ್ದು ಇದರ ಅಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ರಣಮಂಗಲ ದೇವಸ್ಥಾನದಲ್ಲಿ ಅ.23 ರಂದು ಜರುಗಿತು. 
ಪಾಣಾಜೆ ಗ್ರಾ.ಪಂ.ಅಧ್ಯಕ್ಷರಾದ  ಭಾರತಿ‌ ಭಟ್ ದೇವಸ್ಯ ಆಮಂತ್ರಣ ಪತ್ರ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಅನುವಂಶಿಕ ಆಡಳಿತ ಮೋಕ್ತೆಸರರಾದ ಶ್ರೀಕೃಷ್ಣ ಬೋಳಿಲ್ಲಾಯ ಕಡಮಾಜೆ, ದೇವಸ್ಥಾನದ ಆರ್ಚಕರು ಹಾಗೂ ಊರ ಭಕ್ತಾದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here