ಬೆಟ್ಟಂಪಾಡಿ: ವಿನಾಯಕನಗರದಲ್ಲಿ ಕುಣಿತ ಭಜನಾ ತರಬೇತಿ ಉದ್ಘಾಟನೆ

0

ಬೆಟ್ಟಂಪಾಡಿ: ಇಲ್ಲಿನ ವಿನಾಯನಕಗರ ಶ್ರೀ ಸಿದ್ಧಿವಿನಾಯಕ ಭಜನಾ ಮಂದಿರದಲ್ಲಿ ಕುಣಿತ ಭಜನಾ ತರಬೇತಿಯ ಉದ್ಘಾಟನೆ ಅ. 23 ರಂದು ನಡೆಯಿತು.

ಶ್ರೀ ಸಿದ್ದಿವಿನಾಯಕ ಸೇವಾ ಸಮಿತಿಯ ಉಪಾಧ್ಯಕ್ಷೆ ಪ್ರೇಮಲತಾ ರೈ ಆನಡ್ಕ ದೀಪ ಬೆಳಗಿಸಿದರು. ಹಿರಿಯರಾದ ರಾಮಯ್ಯ ರೈ ಕಕ್ಕೂರು, ಲಕ್ಷ್ಮೀನಾರಾಯಣ ರೈ ಡೆಮ್ಮಂಗರ ಹಾಗೂ ಸೇವಾ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಿದ್ಧಿವಿನಾಯಕ ಭಜನಾ ಸಂಘದ ಸದಸ್ಯರು, ಕೇಸರಿ ಭಜನಾ ತಂಡದ ಸದಸ್ಯರು, ಭಕ್ತಾಭಿಮಾನಿಗಳು ಭಾಗವಹಿಸಿದರು.

38 ಮಕ್ಕಳ ಕುಣಿತ ಭಜನಾ ತಂಡಕ್ಕೆ ಕುಣಿತ ಭಜನೆಯಲ್ಲಿ ಹೆಸರು ಪಡೆದಿರುವ ಕೇಸರಿ ಭಜನಾ ತಂಡದ ಸದಸ್ಯರು ತರಬೇತಿಯನ್ನು ನೀಡಲಿದ್ದಾರೆ.

LEAVE A REPLY

Please enter your comment!
Please enter your name here