ನಾಲ್ಕಂಭ ಶ್ರೀ ಷಣ್ಮುಖ ಸ್ಪೋರ್ಟ್ಸ್ ಕ್ಲಬ್‌ನಿಂದ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟ

0

ದಕ್ಷಿಣ ಕನ್ನಡದ ಸಂಸ್ಕೃತಿ ನಮ್ಮ ಸಂಪತ್ತು – ಪ್ರದೀಪ್. ಆರ್. ಗೌಡ ಅರುವ
ಕಾಣಿಯೂರು: ದಕ್ಷಿಣ ಕನ್ನಡದ ಸಂಸ್ಕೃತಿ ಅದು ನಮ್ಮ ಸಂಪತ್ತು. ಅತ್ಯಂತ ನೈಜ್ಯವಾಗಿ ಭಕ್ತಿಯಿಂದ ದೈವರಾಧನೆಯನ್ನು ಮಾಡಿಕೊಂಡು ಬರುತ್ತಿದ್ದೇವೆ. ನಮ್ಮ ಸಂಸ್ಕೃತಿಯನ್ನು ವಾಣಿಜ್ಯಮಯವಾಗಿ ಬಳಸಿಕೊಳ್ಳಬಾರದು. ಭಕ್ತಿ, ಶ್ರದ್ಧೆಯಿಂದ ನಮ್ಮ ಸಂಸ್ಕೃತಿಯನ್ನು ಉಳಿಸಿ, ಬೆಳೆಸಬೇಕು ಎಂದು ಅರುವ ಗುತ್ತಿನ ಯಜಮಾನ ಪ್ರದೀಪ್ ಆರ್ ಗೌಡ ಮೈಸೂರು ಹೇಳಿದರು.

ಅವರು ಚಾರ್ವಾಕ ಗ್ರಾಮದ ನಾಲ್ಕಂಭ ಶ್ರೀ ಷಣ್ಮುಖ ಸ್ಪೋರ್ಟ್ಸ್ ಕ್ಲಬ್ ಇದರ ವತಿಯಿಂದ ಅ23ರಂದು ನಾಲ್ಕಂಭ ಶಕ್ತಿಸಾಗರ ವೇದಿಕೆಯಲ್ಲಿ ನಡೆದ ನಾಲ್ಕಂಭ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಮಾಜ ಅಭಿವೃದ್ಧಿಯ ಪಥದತ್ತ ಹೆಜ್ಜೆಯಿಡಬೇಕಾದರೆ ಸಂಘಟನೆಗಳ ಪಾತ್ರವು ಮುಖ್ಯವಾಗಿರುತ್ತದೆ. ಪರಸ್ಪರ ಅನ್ಯೋನ್ಯತೆಯಿಂದ, ಸ್ನೇಹಮಯಿಯಾಗಿ ಸಮಾಜಮುಖಿ ಚಿಂತನೆಯ ಮೂಲಕ ಉತ್ತಮ ಗುಣಗಳನ್ನು ವೃದ್ಧಿಸಿಕೊಳ್ಳಬೇಕು ಎಂದರು. ಕಾಣಿಯೂರು ಗ್ರಾ.ಪಂ. ಉಪಾಧ್ಯಕ್ಷ ಗಣೇಶ್ ಉದನಡ್ಕ, ಕೊಲ ಜಾನುವಾರು ಸಂವರ್ಧನ ಮತ್ತು ತರಬೇತಿ ಕೇಂದ್ರದ ಉಪನಿರ್ದೇಶಕ ಡಾ| ಧರ್ಮಪಾಲ ಗೌಡ ಕರಂದ್ಲಾಜೆ, ಬಲ್ಪ ಉಪವಲಯ ಅರಣ್ಯಾಧಿಕಾರಿ ಸಂತೋಷ್ ರೈ, ಚಾರ್ವಾಕ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಧನಂಜಯ ಕೇನಾಜೆ, ಸವಣೂರು ಮೆಸ್ಕಾಂನ ಉಮೇಶ್ ಕೆರೆನಾರು, ದೈಪಿಲ ಕ್ರೀಡಾ ಸೇವಾ ಸಂಘದ ಗೌರವಾಧ್ಯಕ್ಷ ಮೋಹನ್ ಕೆ.ಪಿ ರಾಮ್‌ಡೇಲು, ಜಯಶೀಲ ತಾರಾನಾಥ ಬೆದ್ರಾಜೆ, ಚಾರ್ವಾಕ ಚಿಲ್ಲರ್‍ಸ್ ಮಾಲಕ ತೀರ್ಥಪ್ರಸಾದ್ ಕುದ್ಕುಳಿ, ನಾಲ್ಕಂಭ ಷಣ್ಮುಖ ಸ್ಪೋರ್ಟ್ಸ್ ಕ್ಲಬ್‌ನ ಉಪಾಧ್ಯಕ್ಷ ಗೌತಮ್ ಅತಿಥಿಗಳಾಗಿ ಭಾಗವಹಿಸಿದ್ದರು. ನಾಲ್ಕಂಭ ಪ್ರೀಮಿಯರ್ ಲೀಗ್‌ನ ತಂಡದ ಮಾಲಕರು ಉಪಸ್ಥಿತರಿದ್ದರು. ನಾಲ್ಕಂಭ ಶ್ರೀ ಷಣ್ಮುಖ ಸ್ಪೋರ್ಟ್ಸ್ ಕ್ಲಬ್‌ನ ಅಧ್ಯಕ್ಷ ದಿಶಾಂತ್ ಎನ್.ಎಸ್, ಕಾರ್ಯದರ್ಶಿ ಟಿನಿತ್ ಕುಂಬ್ಲಾಡಿ, ಕ್ರೀಡಾ ಕಾರ್ಯದರ್ಶಿ ಗೌರೀಶ್ ಕುಂಬ್ಲಾಡಿ, ಜತೆ ಕಾರ್ಯದರ್ಶಿ ಗಣೇಶ್ ಓಡದಕರೆ, ಕೋಶಾಧಿಕಾರಿ ಕಾರ್ತಿಕ್ ಉದಲಡ್ಡ ಉಪಸ್ಥಿತರಿದ್ದರು. ಕ್ಲಬ್‌ನ ಮಾಜಿ ಅಧ್ಯಕ್ಷರಾದ ಪ್ರಶಾಂತ್ ಅಂಬುಲ ಸ್ವಾಗತಿಸಿ, ವಿಶ್ವನಾಥ ಅಂಬುಲ ವಂದಿಸಿದರು. ಪ್ರದೀಪ್ ಎಣ್ಮೂರು ಕಾರ್ಯಕ್ರಮ ನಿರೂಪಿಸಿದರು.

ಉದ್ಘಾಟನಾ ಸಮಾರಂಭ:
ಅ 22ರಂದು ಬೆಳಿಗ್ಗೆ ಕಾರ್ಯಕ್ರಮವನ್ನು ಸಿ.ಜೆ. ಚಂದ್ರಕಲಾ ಜಯರಾಮ್ ಅರುವಗುತ್ತು ಉದ್ಘಾಟಿಸಿದರು. ನಾಲ್ಕಂಭ ಶ್ರೀ ಷಣ್ಮುಖ ಸ್ಪೋರ್ಟ್ಸ್ ಕ್ಲಬ್‌ನ ಅಧ್ಯಕ್ಷ ದಿಶಾಂತ್ ಎನ್.ಎಸ್. ನಡುಬೈಲು ಅಧ್ಯಕ್ಷತೆಯನ್ನು ವಹಿಸಿದ್ದರು. ಕ್ರೀಡಾಕೂಟವನ್ನು ಸವಣೂರು ವಲಯದ ಒಡಿಯೂರು ಸಂಘದ ಅಧ್ಯಕ್ಷ ಬಾಲಕೃಷ್ಣ ರೈ ಕಾಸ್ಪಾಡಿಗುತ್ತು ಉದ್ಘಾಟಿಸಿದರು. ಪುತ್ತೂರು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ನಿರ್ದೇಶಕ ಪ್ರವೀನ್ ಕುಂಟ್ಯಾನ, ಕುಂಬ್ಲಾಡಿ ಮಾಚಿಲ ಶ್ರೀ ಉಳ್ಳಾಲ್ತಿ ಮೂಲ ಕ್ಷೇತ್ರದ ಅನುವಂಶೀಯ ಮೊಕ್ತೇಸರರಾದ ಪೆರ್ಗಡೆ ಗೌಡ ಮಾಚಿಲ, ಚಾರ್ವಾಕ ಕುಕ್ಕೇನಾಥ ಬಾಲಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನೇಮಣ್ಣ ಗೌಡ ಅಂಬುಲ, ಪುತ್ತೂರು ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ದೇವಯ್ಯ ಗೌಡ ಖಚಿಡಿಗ, ನಾಣಿಲ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ವಸಂತ ದಲಾರಿ, ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ನಾಣಿಲ ಒಕ್ಕೂಟದ ಅಧ್ಯಕ್ಷ ಭಾಗೀರಥಿ ಕುಂಬ್ಲಾಡಿ, ಸ್ಟೆಂಪ್ ಬ್ರೇಕರ್‍ಸ್ ಮಾಲಕ ನವೀನ್ ಕೆ.ಪಿ ರಾಮುಂಡೇಲು, ಕ್ಲಬ್‌ನ ಗೌರವ ಸಲಹೆಗಾರ ಧರ್ಣಪ್ಪ ಗೌಡ ಅಂಬುಲ, ಕಾರ್ಯದರ್ಶಿ ಟಿನಿತ್ ಕುಂಬ್ಲಾಡಿ, ಪ್ರಕಾಶ್ ಅರುವ ಮತ್ತೀತರರು ಉಪಸ್ಥಿತರಿದ್ದರು.

ವಿಜೇತರ ವಿವರ: ನಾಲ್ಕಂಭ ಶ್ರೀ ಷಣ್ಮುಖ ಸ್ಪೋರ್ಟ್ಸ್ ಕ್ಲಬ್‌ನ ವತಿಯಿಂದ ನಡೆದ ನಾಲ್ಕಂಭ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟದಲ್ಲಿ ಜಿ.ಎಂ ಬ್ರದರ್‍ಸ್ ನಾಲ್ಕಂಭ ಪ್ರಥಮ ಸ್ಥಾನ ಪಡೆದುಕೊಂಡು, ಉಳ್ಲಾಲ್ತಿ ಫ್ರೆಂಡ್ಸ್ ನಾಲ್ಕಂಭ ದ್ವಿತೀಯ ಸ್ಥಾನ ಪಡೆದುಕೊಂಡಿತ್ತು. ಚಕ್ರವರ್ತಿ ಎಣ್ಮೂರು ತೃತೀಯ ಸ್ಥಾನ ಪಡೆದುಕೊಂಡಿದೆ.

LEAVE A REPLY

Please enter your comment!
Please enter your name here