ಪುತ್ತೂರು: ಪುತ್ತೂರು ಸಾಮರಸ್ಯ ವೇದಿಕೆ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ತುಡರ್, ಗೋಪೂಜೆ ಕಾರ್ಯಕ್ರಮ ಆ.24ರಂದು ಉರ್ಲಾಂಡಿ ಶ್ರೀಸತ್ಯನಾರಾಯಣಕಟ್ಟೆಯ ಆವರಣದಲ್ಲಿ ನಡೆಯಿತು.
ವಿವೇಕಾನಂದ ತಾಂತ್ರಿಕ ವಿದ್ಯಾಲಯದ ಅಧ್ಯಕ್ಷ ವಿಶ್ವೇಶ್ವರ ಭಟ್ ಬಂಗಾರಡ್ಕ, ವಿ.ಹಿಂ.ಪ. ಪ್ರಮುಖರಾದ ಸೀತಾರಾಮ ಭಟ್ ಪೆರಾಜೆ ಮಾತನಾಡಿ ಶುಭಹಾರೈಸಿದರು. ಆಶ್ರಯ ಪಿ. ಸಾಮರಸ್ಯ ಗೀತೆ ಹಾಡಿದರು, ಶರತ್ ನಾಯರಡ್ಕ ಸ್ವಾಗತಿಸಿ, ಪ್ರಸನ್ನ ನಾಯರಡ್ಕ ವಂದಿಸಿದರು. ಚೇತನಾ ಸ್ಟುಡಿಯೋ ಮಾಲಕ ಅಶೋಕ್ ಕುಂಬ್ಲೆ ಕಾರ್ಯಕ್ರಮ ನಿರೂಪಿಸಿದರು.
ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಳದ ನಂದಾದೀಪವನ್ನು ಕಾಲ್ನಡಿಗೆ ಮೂಲಕ ಉರ್ಲಾಂಡಿ ಸತ್ಯನಾರಾಯಣ ಕಟ್ಟೆವರೆಗೆ ತಂದು ಬಳಿಕ ಪ್ರತಿ ಮನೆಮನೆಯಲ್ಲಿ ದೀಪ ಹಚ್ಚಲಾಯಿತು. ಬಳಿಕ ಗೋಪೂಜೆ ಮಾಡುವ ಮೂಲಕ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ನಗರ ಸಾಮರಸ್ಯ ಪ್ರಮುಖ್ ಸಮಿತಿಯ ಸಹಸಂಚಾಲಕ ದಯಾನಂದ ಕೃಷ್ಣ ಕಾರ್ಯಕ್ರಮದ ಮಾರ್ಗದರ್ಶನ ಮಾಡಿದರು. ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಐತ್ತಪ್ಪ ನಾಯ್ಕ, ಸ್ಥಳೀಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಬಳಿಕ ಸಹಭೋಜನ ನಡೆಯಿತು.
ಚಿತ್ರ: ಚೇತನಾ ಪುತ್ತೂರು