ಪಶು ಇಲಾಖೆಯಲ್ಲಿ ಗೋ ಪೂಜೆ

0

ಪುತ್ತೂರು: ಬಲಿ ಪಾಡ್ಯಮಿ ದಿನ ಗೋ ಪೂಜೆ ನಡೆಸುವಂತೆ ಸರಕಾರದ ಆದೇಶದಂತೆ ಪುತ್ತೂರು ಪಶು ಸಂಗೋಪನಾ ಇಲಾಖೆಯಲ್ಲಿ ಅ.26ರಂದು ಗೋ ಪೂಜೆ ನೆರವೇರಿದೆ.

ಪಶು ಸಂಗೋಪನಾ ಇಲಾಖೆಯ ವೈದ್ಯಾಧಿಕಾರಿ ಡಾ. ಪ್ರಸನ್ನ ಕುಮಾರ್ ಹೆಬ್ಬಾರ್ ಅವರು ಗೋವಿಗೆ ಹೂವಿನ ಹಾರ ಸಮರ್ಪಣೆ, ಆರತಿ ಬೆಳಗಿಸಿದರು. ಈ ಸಂದರ್ಭದಲ್ಲಿ ಹಿರಿಯ ಪಶುವೈದ್ಯಕೀಯ ಪರೀಕ್ಷಕರಾದ ಪ್ರಶಾಂತ್, ಪುಂಡರಿಕಾಕ್ಷ, ಜಾನುವಾರು ಅಭಿವೃದ್ಧಿ ಅಧಿಕಾರಿ ಹೊನ್ನಪ್ಪ ಗೌಡ, ತಾ.ಪಂನ ಶಿವಾನಂದ, ಕುಸುಮ ಸಹಿತ ಹಸುವಿನ ಮಾಲಕ ಪ್ರಜ್ವಲ್ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here