ಮಠಂತಬೆಟ್ಟು ಶ್ರೀಮಹಿಷಮರ್ದಿನಿ ದೇವಸ್ಥಾನದ ನವರಾತ್ರಿ ಉತ್ಸವದಲ್ಲಿ ಬಾರಿಸು ಕನ್ನಡ ಡಿಂಡಿಮ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ

0

ಪುತ್ತೂರು : ಮಠಂತಬೆಟ್ಟು ಶ್ರೀಮಹಿಷಮರ್ದಿನಿ ದೇವಸ್ಥಾನದ ನವರಾತ್ರಿ ಉತ್ಸವದ ಕಾರ್ಯಕ್ರಮದಲ್ಲಿ ಪುತ್ತೂರು ಸಾಂಸ್ಕೃತಿಕ ಕಲಾಕೇಂದ್ರದ ಕಲಾವಿದರಿಂದ ಕೀರ್ತಿ| ಶೇಷ ಚಿದಾನಂದ ಕಾಮತ್ ನಿರ್ದೇಶನದಲ್ಲಿ ನಡೆದು ಬಂದ ಬಾರಿಸು ಕನ್ನಡ ಡಿಂಡಿಮ ತಂಡದಿಂದ ಹಾಡು ಮತ್ತು ನೃತ್ಯಗಳ ಕಾರ್ಯಕ್ರಮ ನಡೆಯಿತು. ತಂಡದ ಕಲಾವಿದರಾದ ಅಶೋಕ್ ಆಚಾರ್, ನಿತೇಶ್, ನವೀನ್ ಐತಾಳ್, ಅನುಶ್ರೀ ಸಾಮೆತಡ್ಕ, ನಿಶಿ, ಶಿವಾನ್ವಿ ರೈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಲಾಕೇಂದ್ರದ ಅಧ್ಯಕ್ಷೆ ವಸಂತಿ ಆರ್. ಐತಾಳ್, ಶೀಲಾ ಜಯರಾಂ, ರೇಣುಕಾ ಎಂ. ರೈ, ನಿರತ ಕೆ. ರೈ ಮಠಂತಬೆಟ್ಟು, ಜ್ಯೋತಿ ನೀಲಂತ್ ಕುಮಾರ್, ನೀಲಂತ್ ಕುಮಾರ್, ಕರುಣಾಕರ ರೈ ಬಾಲ್ಯೊಟ್ಟು ಗುತ್ತು ಮತ್ತಿತರರು ಸಹಕರಿಸಿದರು. ನವ್ಯ ಕೆ. ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here