ಪುತ್ತೂರು ಶ್ರೀಸುಬ್ರಹ್ಮಣ್ಯ ಸಹಕಾರ ಸಂಘದಲ್ಲಿ ಧನಲಕ್ಷ್ಮೀ ಪೂಜೆ

0

ಪುತ್ತೂರು: ಪುತ್ತೂರು ಶ್ರೀಸುಬ್ರಮಣ್ಯ ಸಹಕಾರ ಸಂಘದಲ್ಲಿ ದೀಪಾವಳಿಯ ಪ್ರಯುಕ್ತ ಬಲಿಪಾಡ್ಯ ದಿನದಂದು ಧನಲಕ್ಷ್ಮೀ ಪೂಜೆ ನಡೆಯಿತು. ವೇ.ಸೂರ್ಯನಾರಾಯಣ ಭಟ್‌ರವರ ಪೌರೋಹಿತ್ಯದಲ್ಲಿ ಪೂಜಾ ಕಾರ್ಯಕ್ರಮ ನಡೆಯಿತು. ಶ್ರೀಸುಬ್ರಮಣ್ಯ ಸಹಕಾರ ಸಂಘದ ಅಧ್ಯಕ್ಷ ಕರುಣಾ ರಾವ್ ಬೆಳ್ಳೆ, ಉಪಾಧ್ಯಕ್ಷ ನಟರಾಜ್ ಎನ್.ಎಸ್. ಹಾಗೂ ಪುತ್ತೂರು ಶಾಖೆಯ ಸಲಹಾ ಸಮಿತಿ ಸದಸ್ಯರಾದ ಎನ್.ಕೆ. ಜಗನ್ನಿವಾಸ್ ರಾವ್, ನರೇಂದ್ರ ರಾವ್ ಎಂ, ಬಾಲಕೃಷ್ಣ ರಾವ್ ಎ., ಶಾಖಾ ವ್ಯವಸ್ಥಾಪಕರಾದ ಪ್ರದೀಪ ಹೆಬ್ಬಾರ್, ಸಿಬ್ಬಂದಿಗಳಾದ ಅನುರಾಧ ಪಿ.ಜಿ, ಉಷಾಕಿರಣ, ಸುಮತಿ ಕೆ, ಪಿಗ್ಮಿ ಏಜೆಂಟ್ ಪ್ರವೀಣ ಕೆ., ಮೋಹನ್ ಗೌಡ ಹಾಗೂ ಗ್ರಾಹಕರು ಉಪಸ್ಥಿತರಿದ್ದರು. ಬಿರುಮಲೆ ಬೆಟ್ಟದಲ್ಲಿರುವ ಪ್ರಜ್ಞಾ ಆಶ್ರಮದ ಮಕ್ಕಳಿಗೆ ಸಿಹಿ ತಿಂಡಿ ಹಾಗೂ ಉಪಹಾರವನ್ನು ಸಂಘದ ವ್ಯವಸ್ಥಾಪಕ ಪ್ರದೀಪ ಹೆಬ್ಬಾರ್ ಸಂಘದ ಪರವಾಗಿ ವಿತರಿಸಿದರು.

LEAVE A REPLY

Please enter your comment!
Please enter your name here