ನಿವೃತ್ತ ಎಲೆಕ್ಟ್ರಿಕಲ್ ಇಂಜಿನಿಯರ್  ಪಿ. ಚಂದ್ರಶೇಖರ ಐತಾಳ ನಿಧನ

0

ಪುತ್ತೂರು: ಮಂಗಳೂರು ಸುರತ್ಕಲ್ ನಿವಾಸಿ, ನಿವೃತ್ತ ಎಲೆಕ್ಟ್ರಿಕಲ್ ಇಂಜಿನಿಯರ್ ಪಿ. ಚಂದ್ರಶೇಖರ ಐತಾಳ (74ವ.)ರವರು ಅ.25 ರಂದು ನಿಧನ ಹೊಂದಿದರು. ಮೃತರು ಪತ್ನಿ, ಪುತ್ರ, ಪುತ್ರಿಯರನ್ನು ಅಗಲಿದ್ದಾರೆ.

1970ರಲ್ಲಿ ಕೆಇಬಿ ಕುಲಶೇಖರದಲ್ಲಿ ಇಂಜಿನಿಯರ್ ಆಗಿ ಸೇವೆ ಆರಂಭಿಸಿದ ಅವರು ಬಳಿಕ ಮಂಗಳೂರಿನ ಪಣಂಬೂರು, ಪುತ್ತೂರು, ನೆಹರು ಮೈದಾನ, ಕಿನ್ನಿಗೋಳಿ, ಕಾವೂರು, ಅಶೋಕನಗರ, ಅತ್ತಾವರದಲ್ಲಿ ಒಟ್ಟು 36 ವರ್ಷ ಸೇವೆ ಸಲ್ಲಿಸಿ 2006ರಲ್ಲಿ ಚೀಫ್ ಇಂಜಿನಿಯರ್ ಆಗಿ ನಿವೃತ್ತಿ ಹೊಂದಿದ್ದರು. ಕೂಟ ಮಹಾ ಜಗತ್ತು ಅಂಗಸಂಸ್ಥೆ, ಕಾಟಿಪಳ್ಳ-ಕೃಷ್ಣಾಪುರ ಇದರ ಸ್ಥಾಪಕಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಪಣಂಬೂರು ನಂದನೇಶ್ವರ ದೇವಸ್ಥಾನದಲ್ಲಿ ಧಾರ್ಮಿಕ, ಸಾಮಾಜಿಕವಾಗಿ ಸಕ್ರಿಯರಾಗಿದ್ದರು.

LEAVE A REPLY

Please enter your comment!
Please enter your name here