ನಿಡ್ಪಳ್ಳಿ ಗುತ್ತು ಚಾವಡಿಯಲ್ಲಿ ಪುದ್ವಾರ್ ಮೆಚ್ಚಿ ಕಾಲಾವದಿ ನೇಮೋತ್ಸವ

0

 ನಿಡ್ಪಳ್ಳಿ; ಶ್ರೀ ಕಿನ್ನಿಮಾಣಿ ಪೂಮಾಣಿ ಹಾಗೂ ಪರಿವಾರ ದೈವಗಳ ದೈವಸ್ಥಾನ ಶ್ರೀ ಕ್ಷೇತ್ರ ನಿಡ್ಪಳ್ಳಿ ಹುಲಿ ಭೂತಕ್ಕೆ ಪುದ್ವಾರ್ ಮೆಚ್ಚಿ ನೆಮೋತ್ಸವ ಅ.27 ರಂದು  ಗುತ್ತು ಚಾವಡಿಯಲ್ಲಿ ನಡೆಯಿತು.
     ಅ.26 ರಂದು ಬೆಳಿಗ್ಗೆ ಕ್ಷೇತ್ರದ ತಂತ್ರಿಗಳಾದ ದೇಲಂಪಾಡಿ ಗಣೇಶ ತಂತ್ರಿಗಳ ನೇತೃತ್ವದಲ್ಲಿ ಗುತ್ತು ಚಾವಡಿಯಲ್ಲಿ ಕದಿರು ತುಂಬಿಸುವ ಕಾರ್ಯಕ್ರಮ ನಡೆದು ದೈವಗಳ ಶುದ್ದಿ ಕಲಶ ನಡೆಯಿತು.ನಂತರ ದೀಪಾವಳಿ ಪ್ರಯುಕ್ತ ದೈವಗಳಿಗೆ ತಂಬಿಲ ಸೇವೆ ನಂತರ ಮಧ್ಯಾಹ್ನ ಪ್ರಸಾದ ವಿತರಣೆ  ಅನ್ನಸಂತರ್ಪಣೆ ನಡೆಯಿತು.
    ಮಧ್ಯಾಹ್ನ ಪಲ್ಲಕ್ಕಿ ಸಹಿತ ಗುತ್ತು ಚಾವಡಿಯಿಂದ ದೈವಗಳ ಭಂಡಾರ ಹೊರಟು ಮುಂಡೂರು ಸಣ್ಣ ಉಳ್ಳಾಕುಲು ಚಾವಡಿಯಲ್ಲಿ ತಂಬಿಲ ಸೇವೆ ನಡೆಯಿತು.ನಂತರ ಉಳ್ಳಾಕುಲು ಮಾಡಕ್ಕೆ ದೈವಗಳ ಭಂಡಾರ ಬಂದು ತಂಬಿಲ ಸೇವೆ ನಡೆಯಿತು.
  ರಾತ್ರಿ  ಗುತ್ತು ಚಾವಡಿಯಲ್ಲಿ ಹುಲಿಭೂತದ ಭಂಡಾರ ತೆಗೆದು ಅ. 27 ರಂದು ಬೆಳಿಗ್ಗೆ  ಗುತ್ತು ಚಾವಡಿಯಲ್ಲಿ ಹುಲಿಭೂತಕ್ಕೆ ಪುದ್ವಾರ್ ಮೆಚ್ಚಿ ನೇಮೋತ್ಸವ ನಡೆಯಿತು. ಮಧ್ಯಾಹ್ನ ದೈವದ ಪ್ರಸಾದ ವಿತರಣೆ ನಂತರ  ಅನ್ನಸಂತರ್ಪಣೆ ನಡೆಯಿತು.

LEAVE A REPLY

Please enter your comment!
Please enter your name here