ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟಕ್ಕೆ ಆಯ್ಕೆ

0

ಕೆಯ್ಯೂರು:    ದಕ್ಷಿಣ ಕನ್ನಡ ಜಿಲ್ಲಾ ವಾಲಿಬಾಲ್ ಅಸೋಸಿಯೇಷನ್ ವತಿಯಿಂದ ಪುತ್ತೂರು ಸುದಾನ ವಿದ್ಯಾ ಸಂಸ್ಥೆಯಲ್ಲಿ ಅ23 ರಂದು ನಡೆದ ವಾಲಿಬಾಲ್ ಚಾಂಪಿಯನ್ ಶಿಪ್ ಟ್ರೋಫಿ 2022ಕ್ಕೆ 14ರ ವಯೋಮಾನದಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಕೆಯ್ಯೂರು ಪ್ರಾಥಮಿಕ ವಿಭಾಗದ ಎಂಟನೇ ತರಗತಿ ವಿದ್ಯಾರ್ಥಿ ದೇವಿ ಪ್ರಸಾದ್  ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಇವರುಅ29ರಂದು ಮಂಗಳೂರಿನಲ್ಲಿ ನಡೆಯುವ ಜಿಲ್ಲಾ ವಾಲಿಬಾಲ್ ಪಂದ್ಯಾಟದಲ್ಲಿ ಪುತ್ತೂರು ತಾಲೂಕು ವಾಲಿಬಾಲ್ ಅಸೋಸಿಯೇಷನ್ 14ರ ವಯೋಮಾನದ ತಂಡವನ್ನು  ಪ್ರತಿನಿಧಿಸಲಿದ್ದಾರೆ.ಇವರು ಪಲ್ಲತ್ತಡ್ಕ ರಾಮಚಂದ್ರ ಮತ್ತು ಉಷಾ ಕುಮಾರಿ ಇವರ ಪುತ್ರ. ಇವರಿಗೆ ಶಾಲಾ ಶಿಕ್ಷಕವೃಂದ ತರಬೇತಿ ನೀಡಿರುತ್ತಾರೆ.

LEAVE A REPLY

Please enter your comment!
Please enter your name here