ನೆಲ್ಯಾಡಿ: ಬಾರ್‌ನಲ್ಲಿ ಕೆಲಸಕ್ಕಿದ್ದ ಮೂಡಬಿದ್ರೆಯ ಹೊನ್ನಯ್ಯ ಅಸೌಖ್ಯದಿಂದ ನಿಧನ

0

ನೆಲ್ಯಾಡಿ: ಇಲ್ಲಿನ ಬಾರ್‌ವೊಂದರಲ್ಲಿ ಕೆಲಸಕ್ಕಿದ್ದ ಮೂಡಬಿದ್ರೆ ನಿವಾಸಿಯೋರ್ವರು ಅಸೌಖ್ಯದಿಂದ ಅ.27ರಂದು ಮೃತಪಟ್ಟಿದ್ದಾರೆ.

ನೆಲ್ಯಾಡಿಯ ಚರಣ್ ಬಾರ್‌ನಲ್ಲಿ ಕೆಲಸಕ್ಕಿದ್ದ ಮೂಡಬಿದ್ರೆ ತಾಲೂಕಿನ ಬೆಳುವಾಯಿ ಗ್ರಾಮದ ಮಾಲಾಡಿ ದರ್ಖಾಸು ಮನೆಯ ಹೊನ್ನಯ್ಯ(62ವ.)ಮೃತಪಟ್ಟವರಾಗಿದ್ದಾರೆ. ಹೊನ್ನಯ್ಯರವರು ಸುಮಾರು 12 ವರ್ಷಗಳ ಹಿಂದೆ ಮನೆಯಿಂದ ಹೋದವರು ಮತ್ತೆ ಮನೆಗೆ ವಾಪಾಸು ಹೋಗಿರಲಿಲ್ಲ. ನೆಲ್ಯಾಡಿಯ ಚರಣ್ ಬಾರ್‌ನಲ್ಲಿ ಕೆಲಸಕ್ಕಿದ್ದ ಹೊನ್ನಯ್ಯರವರಿಗೆ ಉಸಿರಾಟದ ತೊಂದರೆಯೂ ಇತ್ತು. ಅ.27ರಂದು ಬೆಳಿಗ್ಗೆ ಅಸೌಖ್ಯದಿಂದ ಮಲಗಿದ್ದವರನ್ನು ಚಿಕಿತ್ಸೆಗಾಗಿ ನೆಲ್ಯಾಡಿಯ ಅಶ್ವಿನಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿನ ವೈದ್ಯರು ಪರೀಕ್ಷಿಸಿ ಚಿಕಿತ್ಸೆ ನೀಡಿದ್ದರೂ ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಈ ಬಗ್ಗೆ ಮೃತರ ಪತ್ನಿ ಪದ್ಮಾವತಿಯವರು ನೀಡಿರುವ ದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here