ಅಕ್ರಮ ಕರು ಸಾಗಾಟ: ಆರೋಪಿ ವಶ

0

ಉಪ್ಪಿನಂಗಡಿ: ಅಕ್ರಮವಾಗಿ ಹಾಗೂ ಹಿಂಸಾತ್ಮಕವಾಗಿ ಅಟೋ ರಿಕ್ಷಾದಲ್ಲಿ ಕರುವೊಂದನ್ನು ಸಾಗಿಸಿದ ಪ್ರಕರಣವನ್ನು ಉಪ್ಪಿನಂಗಡಿ ಪೊಲೀಸರು ಪತ್ತೆ ಹಚ್ಚಿದ್ದು, ಆರೋಪಿಯನ್ನು ಬಂಧಿಸಿ,  ಕರುವನ್ನು ರಕ್ಷಿಸಿದ್ದಾರೆ.
ರಾಮನಗರ ಬಳಿಯ ನಿನ್ನಿಕಲ್ಲು ನಿವಾಸಿ ಅಬ್ದುರ್ರಹ್ಮಾನ್ ಯಾನೆ ಪಿಸ್ತೂಲ್ (40) ಬಂಧಿತ ಆರೋಪಿ. ಈತ ದನದ ಗಂಡು ಕರುವೊಂದನ್ನು ಅಟೋ ರಿಕ್ಷಾದಲ್ಲಿ ಪ್ರಯಾಣಿಕರು ಕುಳಿತುಕೊಳ್ಳುವ ಸೀಟಿನ ಕೆಳಗಡೆ ಹಿಂಸಾತ್ಮಕವಾಗಿ ಕಟ್ಟಿ ತೆಗೆದುಕೊಂಡು ಹೋಗುತ್ತಿದ್ದನು. ಈ ಬಗ್ಗೆ ಖಚಿತ ಮಾಹಿತಿಯನ್ನರಿತ ಉಪ್ಪಿನಂಗಡಿ ಪೊಲೀಸರು ನೂಜಿ ಬಳಿ ಈತನ ಅಟೋ ರಿಕ್ಷಾವನ್ನು ಪತ್ತೆ ಹಚ್ಚಿ ವಶಪಡಿಸಿಕೊಂಡು, ಈತನನ್ನು ಬಂಧಿಸಿ, ಕರುವನ್ನು ರಕ್ಷಿಸಿದ್ದಾರೆ. ಈತ ಈ ಕರುವನ್ನು ವಧಾಗೃಹಕ್ಕೆ ಸಾಗಿಸುತ್ತಿದ್ದ ಎಂಬ ಮಾಹಿತಿ ತಿಳಿದುಬಂದಿದೆ. ವಶಪಡಿಸಿಕೊಂಡ ಕರುವಿನ ಮೌಲ್ಯ ಸುಮಾರು 2500 ರೂ. ಹಾಗೂ ರಿಕ್ಷಾದ ಮೌಲ್ಯ ಸುಮಾರು 1 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here