ಕೆ.ಎಸ್.ಆರ್.ಟಿ.ಸಿ ಪುತ್ತೂರು ಘಟಕದಿಂದ ಕನ್ನಡ ರಾಜ್ಯೋತ್ಸವ ‘ಕನ್ನಡದ ತೇರು’

0

ಪುತ್ತೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಪುತ್ತೂರು ಘಟಕದ ವತಿಯಿಂದ ನ.1 ರಂದು ಕನ್ನಡ ರಾಜ್ಯೋತ್ಸವದ ಕನ್ನಡ ತೇರನ್ನು ಪುತ್ತೂರ ವಿಭಾಗೀಯ ನಿಯಂತ್ರಣಾಧಿಕಾರಿಯವರು ಕನ್ನಡ ಧ್ವಜ ಹಾರಿಸುವ ಮೂಲಕ ಬೆಳಗ್ಗೆ ಪುತ್ತೂರು ಘಟಕದಲ್ಲಿ ಉದ್ಗಾಟಿಸಿದರು.
ಈ ಸಂದರ್ಭದಲ್ಲಿ ಕೆ ಎಸ್ ಆರ್.ಟಿ.ಸಿ ಯ ಪುತ್ತೂರು ಘಟಕದ ಹಿರಿಯ ಘಟಕ ವ್ಯವಸ್ಥಾಪಕರಾದ ಇಸ್ಮಾಯಿಲ್. ಪಿ ಹಾಗೂ ವಿಭಾಗ ಹಿರಿಯ ಅಧಿಕಾರಿಯವರು ಉಪಸ್ಥಿತರಿದ್ದರು. ಪುತ್ತೂರು ಘಟಕದಿಂದ ಹೊರಟ ಕನ್ನಡದ ತೇರು ಸಂಪ್ಯ ಪೋಲೀಸ್ ಠಾಣೆಯ ಮುಂಭಾಗದಲ್ಲಿ ಸಹಾಯಕ ಆರಕ್ಷಕ ಅಧಿಕಾರಿಯವರಾದ ಮುರುಗೇಶ ಅವರಿಂದ ಪೂಜೆ ಕೈಗೊಂಡು ಬಳಿಕ ಕನ್ನಡ ಹಾಡುಗಳೊಂದಿಗೆ ಸಿಂಗರಿಸಿದ ಬಸ್ ನಲ್ಲಿ ನಗರ ಪ್ರದಕ್ಷಿಣೆ ಮಾಡಲಾಯಿತು.

LEAVE A REPLY

Please enter your comment!
Please enter your name here