ವರ್ಲ್ಡ್ ಬಂಟ್ ಫೆಡರೇಷನ್ ಟ್ರಸ್ಟ್ ಮಂಗಳೂರು ವತಿಯಿಂದ ಅಲ್ ಕಾರ್ಗೋ ಸಂಸ್ಥೆಯ ಶಶಿಕಿರಣ್ ಶೆಟ್ಟಿಯವರ ಪ್ರಾಯೋಜಕತ್ವದಲ್ಲಿ ನಿರ್ಮಾಣಗೊಂಡ 5 ಮನೆಗಳ ಹಸ್ತಾಂತರ

0


ಪುತ್ತೂರು: ವರ್ಲ್ಡ್ ಬಂಟ್ ಫೆಡರೇಷನ್ ಟ್ರಸ್ಟ್ ಮಂಗಳೂರು ಇದರ ವತಿಯಿಂದ ಅಲ್ ಕಾರ್ಗೋ ಸಂಸ್ಥೆಯ ಶಶಿಕಿರಣ್ ಶೆಟ್ಟಿ ಅವರ ಪ್ರಾಯೋಜಕತ್ವದಲ್ಲಿ ಪುತ್ತೂರು ತಾಲೂಕು ಬಂಟರ ಸಂಘದ 2020-21ನೇ ಸಾಲಿನ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈಯವರ ಮನವಿ ಮತ್ತು ಶಿಪಾರಸಿನಂತೆ ತಲಾ 6 ರಿಂದ 7 ಲಕ್ಷ ರೂಪಾಯಿ ವೆಚ್ಚದಲ್ಲಿ ಏಳು ಮನೆಗಳು ನಿರ್ಮಾಣಗೊಂಡಿದ್ದು, ಅ. 30 ರಂದು 5 ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರ ಮಾಡಲಾಯಿತು
ಕುರಿಯ ಗ್ರಾಮದ ಮಲಾರು (ಸಂಪ್ಯ)ನಿವಾಸಿ ಪದ್ಮಾವತಿ ರೈ ಕೋಂ ದಿ ಗೋಪಾಲ ರೈ, ಒಳಮೊಗ್ರು ಗ್ರಾಮದ ಪರಮೇಶ್ವರಿ ಕೋಂ ಬಿ ಬಾಲಕೃಷ್ಣ ರೈ, ಕೆದಂಬಾಡಿ ಗ್ರಾಮದ ಚಾವಡಿ ರಂಜಿನಿ ಕೋಂ ಗಣೇಶ್ ರೈ, ಕೆಯ್ಯೂರು ಗ್ರಾಮದ ಮಾಡಾವು ಶೇಡಿಮನೆ ಗುಣವತಿ ಕೋಂ ಕೃಷ್ಣ ಭಂಡಾರಿ ಹಾಗೂ ಶಾಂತಿಗೋಡು ಗ್ರಾಮದ ಆನಡ್ಕ ನಿವಾಸಿ ಉಮಾವತಿ ಕೊಂ ಗಿರಿಯಪ್ಪ ಪೂಜಾರಿರವರುಗಳಿಗೆ ಮನೆ ಹಸ್ತಾಂತರ ಮಾಡಲಾಯಿತು.
ಮನೆ ಹಸ್ತಾಂತರ ಕಾರ್ಯಕ್ರಮದಲ್ಲಿ ವರ್ಲ್ಡ್ ಬಂಟ್ ಫೌಂಡೇಶನ್ ಟ್ರಸ್ಟ್ ನ ಕಾರ್ಯದರ್ಶಿ ಎಣ್ಮಕಜೆ ಸುಧೀರ್ ಕುಮಾರ್ ಶೆಟ್ಟಿ , ಸಿ.ಎ, ಪ್ರಾಜೆಕ್ಟ್ ನಿರ್ದೇಶಕ ಡಾ. ಬೂಡಿಯಾರ್ ಸಂಜೀವ ರೈ, ಟ್ರಸ್ಟಿಗಳಾದ ಸುದೇಶ್ ಕುಮಾರ್ ರೈ , ಕೆ.ಎಂ ಶೆಟ್ಟಿ, ಡಾ. ಬೂಡಿಯಾರ್ ಸಚ್ಚಿದಾನಂದ ರೈ ಹಾಗೂ ಪ್ರಕಾಶ್ ಮಾಣಾಯಿ ಪಾಲ್ಗೊಂಡಿದ್ದರು. ಬೂಡಿಯಾರ್ ರಾಧಾಕೃಷ್ಣ ರೈಯವರು ಕಾರ್ಯಕ್ರಮ ಸಂಯೋಜಿಸಿ ಸರ್ವರನ್ನೂ ಸ್ವಾಗತಿಸಿ, ಗೌರವಿಸಿ ಕೃತಜ್ಞತೆ ಸಮರ್ಪಿಸಿದರು. ಪುತ್ತೂರು ತಾಲೂಕು ಬಂಟರ ಸಂಘದ ಮಾಜಿ ಅಧ್ಯಕ್ಷ ಸವಣೂರು ಕೆ.ಸೀತಾರಾಮ ರೈ, ಬಂಟ ಸಮಾಜದ ಪ್ರಮುಖರಾದ ಚಿಕ್ಕಪ್ಪ ನಾೈಕ್ ಅರಿಯಡ್ಕ, ಕರುಣಾಕರ ರೈ ದೇರ್ಲ, ಜಗಜೀವನ್‍ದಾಸ್ ರೈ ಚಿಲ್ಮೆತ್ತಾರು, ಜೈರಾಜ್ ಭಂಡಾರಿ ನೊಣಾಲು, ಗಣೇಶ್ ರೈ ಮಿತ್ರಂಪಾಡಿ, ಕೃಷ್ಣಪ್ರಸಾದ್ ಆಳ್ವ ಉಪ್ಪಳಿಗೆ, ನಾರಾಯಣ ರೈ ಬಾರಿಕೆ, ಚಂದ್ರಹಾಸ್ ಶೆಟ್ಟಿ ಎನ್, ಮೋಹನ್ ರೈ ನರಿಮೊಗರು, ಗಣೇಶ್ ರೈ ಬೂಡಿಯಾರ್, ರವೀಂದ್ರನಾಥ ರೈ ಬಳ್ಳಮಜಲುಗುತ್ತು, ನವೀನ್ ರೈ ಬಳ್ಳಮಜಲು, ಭರತ್ ರೈ ಪಾಲ್ತಾಡಿ, ಸೀತಾರಾಮ ರೈ ಕೆದಂಬಾಡಿಗುತ್ತು, ಅಮ್ಮಣ್ಣ ರೈ ಪಾಪೆಮಜಲು, ಶಿವರಾಮ ಆಳ್ವ ಬಳ್ಳಮಜಲುಗುತ್ತು, ಸೂರ್ಯಪ್ರಸನ್ನ ರೈ ತಿಂಗಳಾಡಿ, ಎ.ಕೆ.ಜಯರಾಮ ರೈ ಕೆಯ್ಯೂರು, ಸಂತೋಷ್ ಕುಮಾರ್ ರೈ ಇಳಂತಾಜೆ, ರಮೇಶ್ ರೈ ಬೊಳಿಕಳ, ಶಿವರಾಮ ರೈ ಕಜೆ, ಕೆದಂಬಾಡಿ ಗ್ರಾ.ಪಂ, ಅಧ್ಯಕ್ಷ ರತನ್ ರೈ ಕುಂಬ್ರ, ಮಾಜಿ ಅಧ್ಯಕ್ಷ ಪ್ರವೀಣ್ ಶೆಟ್ಟಿ ತಿಂಗಳಾಡಿ, ಪುತ್ತೂರು ತಾಲೂಕು ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಸಬಿತಾ ಭಂಡಾರಿ, ಬಂಟರ ಸಂಘದ ಗ್ರಾಮ ಸಮಿತಿಗಳ ಪ್ರಮುಖರು ಉಪಸ್ಥಿತರಿದ್ದರು. ಪುತ್ತೂರು ತಾಲೂಕು ಬಂಟರ ಸಂಘದ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ ಕಾರ್ಯಕ್ರಮ ನಿರೂಪಿಸಿದರು. ಆನಡ್ಕ ಉಮಾವತಿ ಅವರಿಗೆ ಮನೆ ಹಸ್ತಾಂತರ ಸಂದರ್ಭದಲ್ಲಿ ಬಿಲ್ಲವ ಸಂಘದ ಮಾಜಿ ಅಧ್ಯಕ್ಷ, ಉದ್ಯಮಿ ಜಯಂತ ನಡುಬೈಲು, ನಾರಾಯಣ ಪೂಜಾರಿ ಕುರಿಕ್ಕಾರ, ನಿತೀಶ್ ಕುಮಾರ್ ಶಾಂತಿವನ ಸೇರಿದಂತೆ ಬಿಲ್ಲವ ಸಮಾಜದ ಹಲವು ಮುಖಂಡರು ಉಪಸ್ಥಿತರಿದ್ದರು.
ಮುಂದಿನ ತಿಂಗಳು 2 ಮನೆ ಹಸ್ತಾಂತರ: ಇನ್ನುಳಿದ 2 ಫಲಾನುಭವಿಗಳಿಗೆ ಮುಂದಿನ ತಿಂಗಳು ಮನೆ ಹಸ್ತಾಂತರಿಸಲಾಗುವುದು ಎಂದು ಬೂಡಿಯಾರ್ ರಾಧಾಕೃಷ್ಣ ರೈ ತಿಳಿಸಿದ್ದಾರೆ. ಮನೆ ಹಸ್ತಾಂತರ ಸಮಾರಂಭದಲ್ಲಿ ಪಾಲ್ಗೊಂಡಿದ್ದವರಿಗೆ ಆಲಡ್ಕ ಹೋಂ ಪ್ರೊಡಕ್ಟ್ಸ್ ನವರಿಂದ ಕಪ್ಪು ದ್ರಾಕ್ಷೆ ಹಣ್ಣಿನ ತಾಜಾ ಪಾನೀಯವನ್ನು ವಿತರಿಸಲಾಯಿತು.

LEAVE A REPLY

Please enter your comment!
Please enter your name here