ರಾಷ್ಟ್ರಮಟ್ಟದ ಚಿತ್ರಕಲೆಯಲ್ಲಿ ಮಹೇಶ್ ಕೆ.ರವರಿಗೆ ಚಿನ್ನದ ಪದಕ

0

ಪುತ್ತೂರು : ಉಜ್ಜಯಿನಿಯ ಕಲಾವರ್ಟ್ ನ್ಯಾಸ್ ಅವರು ರಾಷ್ಟ್ರಮಟ್ಟದಲ್ಲಿ ಕಾಲೇಜು ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ಚಿತ್ರಕಲಾ ಸ್ವರ್ಧೆಯಲ್ಲಿ ಮಂಗಳೂರಿನ ಮಹಾಲಸಾ ಕಾಲೇಜ್ ಆಫ್ ವಿಶುವಲ್ ಆರ್ಟ್ಸ್‌ನ ಅಂತಿಮ ಪದವಿ ವಿದ್ಯಾರ್ಥಿ ಮಹೇಶ್ ಕೆ. ಚಿನ್ನದ ಪದಕ ಗಳಿಸಿದ್ದಾರೆ.

ಇವರ “ರೆಡ್ ಬೋಟ್” ಮತ್ತು “ಜರ್ನಿ ಬಿಗಿನಿಂಗ್ಸ್ ” ಎಂಬ ಕಲಾಕೃತಿಗಳಿಗೆ ಅತ್ಯುತ್ತಮ ಕಲಾಕೃತಿಗಳೆಂದು ತೀರ್ಪುಗಾರರ ಮೆಚ್ಚುಗೆಗಳಿಸಿ, ಚಿನ್ನದ ಪದಕದ ಪುರಸ್ಕಾರಕ್ಕೆ ಆಯ್ಕೆಯಾಗಿದೆ. ಇವರು ಕೊಳ್ತಿಗೆ ಗ್ರಾಮದ ದಿ.ಕೇಶವ ಆಚಾರ್ಯರವರ ಪುತ್ರ, ಹಾಗೂ ಪೆರ್ಲಂಪಾಡಿ ಷಣ್ಮುಖದೇವ ಪ್ರೌಢಶಾಲೆ ಮತ್ತು ಬೆಳ್ಳಾರೆ ಸ.ಪ.ಪೂ.ಕಾಲೇಜಿನ ಹಳೆವಿದ್ಯಾರ್ಥಿ.

LEAVE A REPLY

Please enter your comment!
Please enter your name here