ರಾಷ್ಟ್ರಮಟ್ಟದ ಚಿತ್ರಕಲಾ ಸ್ಪರ್ಧೆ : ಕೊಳ್ತಿಗೆಯ ಲೋಹಿತ್ ಅಟೋಳಿಗೆ ಚಿನ್ನದ ಪದಕ

0

ಪುತ್ತೂರು: ಉಜ್ಜಯಿನಿಯ ಕಲಾವರ್ಟ್ ನ್ಯಾಸ್ ಅವರು ರಾಷ್ಟ್ರಮಟ್ಟದಲ್ಲಿ ಕಾಲೇಜು ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ಚಿತ್ರಕಲಾ ಸ್ಪರ್ಧೆಯಲ್ಲಿ ಮಂಗಳೂರಿನ ಮಹಾಲಸ ಕಾಲೇಜು ಆಫ್ ವಿಶುವಲ್ ಆರ್ಟ್ಸ್ ನ ಅಂತಿಮ ಪದವಿ ವಿದ್ಯಾರ್ಥಿ ಲೋಹಿತ್ ಎ ಆಟೋಳಿ ಇವರು ಚಿನ್ನದ ಪದಕಗಳಿಸಿದ್ದಾರೆ. ಇವರ ವೋಟರ್ಸ್ ಕಾಲೋನಿ ಮತ್ತು ಹಂಗರ್ ಎಂಬ ಕಲಾಕೃತಿಗಳಿಗೆ ಅತ್ಯುತ್ತಮ ಕಲಾಕೃತಿಗಳೆಂದು ತೀರ್ಪುಗಾರರ ಮೆಚ್ಚುಗೆ ಗಳಿಸಿ ಚಿನ್ನದ ಪದಕ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ. ಇವರು ಕೊಳ್ತಿಗೆ ಗ್ರಾಮದ ಆಟೋಳಿ ವಸಂತ ಪೂಜಾರಿ ಮತ್ತು ರೇವತಿರವರ ಪುತ್ರ. ಕೊಳ್ತಿಗೆ ಹಿರಿಯ ಪ್ರಾಥಮಿಕ ಶಾಲೆಯ ಹಿರಿಯ ವಿದ್ಯಾರ್ಥಿಯಾಗಿದ್ದಾರೆ.

LEAVE A REPLY

Please enter your comment!
Please enter your name here