ಪಂಚಾಯತ್ ಗೇಟ್ ವಾಲ್ವ್ ಮುರಿದು ಖಾಸಗಿ ಕಾಮಗಾರಿಗೆ ನೀರು-ಆರೋಪ

0

ಕೌಡಿಚ್ಚಾರ್:ಗ್ರಾಮ ಪಂಚಾಯತ್ ನೀರು ಪೂರೈಕೆ ಗೇಟ್ ವಾಲ್ವ್ ಬೀಗ ಮುರಿದು ಖಾಸಗಿ ಕಾಮಗಾರಿಗೆ ನೀರು ಒದಗಿಸಲಾಗಿದೆ ಎಂದು ಆರೋಪಿಸಿ ಅರಿಯಡ್ಕ ಗ್ರಾಮ ಪಂಚಾಯತ್ ವಾಟರ್‌ಮ್ಯಾನ್ ಕೆ.ವಿಠಲ ನಾಯ್ಕ ಅವರು ಗ್ರಾಮ ಪಂಚಾಯತ್‌ಗೆ ದೂರು ನೀಡಿದ್ದಾರೆ.


ಪಂಚಾಯತ್ ವ್ಯಾಪ್ತಿಯ ಬಪ್ಪಪುಂಡೇಲು ಎಂಬಲ್ಲಿ ಅಪ್ಪಯ್ಯ ನಾಯ್ಕ ಎಂಬವರ ಮನೆಗೆ ಹೋಗುವ ರಸ್ತೆಗೆ ಕಾಂಕ್ರಿಟೀಕರಣ ಕಾಮಗಾರಿ ನಡೆಯುತ್ತಿದೆ.ಇದು ಗ್ರಾಮ ಪಂಚಾಯತ್ ರಸ್ತೆ, ಪಂಚಾಯತ್‌ರಾಜ್ ಇಂಜಿನಿಯರಿಂಗ್ ವಿಭಾಗದಿಂದ ಆಗುತ್ತಿರುವ ಕಾಮಗಾರಿಯಾಗಿರುವುದಿಲ್ಲವಾದ್ದರಿಂದ ಇದಕ್ಕೆ ಪಂಚಾಯತ್‌ನ ಕುಡಿಯುವ ನೀರು ಉಪಯೋಗಿಸಲು ಅವಕಾಶವಿಲ್ಲ.ಆದರೂ ನನ್ನ ಗಮನಕ್ಕೆ ತರದೆ ಕಾಮಗಾರಿ ಗುತ್ತಿಗೆದಾರ ಹಾಗೂ ಪಂಚಾಯತ್ ಸದಸ್ಯ ನಾರಾಯಣ ನಾಯ್ಕ ಚಾಕೋಟೆ ಅವರು ಪಂಚಾಯತ್‌ನ ಕುಡಿಯುವ ನೀರಿನ ಗೇಟ್ ವಾಲ್ವ್‌ನ್ನು ಬಲತ್ಕಾರವಾಗಿ ಮುರಿದು ಸದ್ರಿ ಕಾಮಗಾರಿಗೆ ನೀರನ್ನು ಉಪಯೋಗಿಸಿರುವುದಾಗಿ ಆರೋಪಿಸಿ ವಿಠಲ ನಾಯ್ಕ ಅವರು ಗ್ರಾಮ ಪಂಚಾಯತ್‌ಗೆ ದೂರು ನೀಡಿದ್ದು ತಪ್ಪಿತಸ್ಥರ ಮೇಲೆ ಕಾನೂನು ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

LEAVE A REPLY

Please enter your comment!
Please enter your name here