ನ.14: ನೆಹರು ನೆನಪು ವಿಚಾರ ವೇದಿಕೆಯಿಂದ ನೆಹರು ನೆನಪು ಕಾರ್ಯಕ್ರಮ

0

 

ಪುತ್ತೂರು: ನೆಹರು ವಿಚಾರ ವೇದಿಕೆ ಪುತ್ತೂರು ಇದರ ವತಿಯಿಂದ ನೆಹರು ನೆನಪು ವಿಶೇಷ ಕಾರ್ಯಕ್ರಮವು ನ.೧೪ರಂದು ಸಂಜೆ ೪ ಗಂಟೆಗೆ ಬೈಪಾಸ್ ರಸ್ತೆಯ ಅಶ್ಮಿ ಕಂಫರ್ಟ್‌ನಲ್ಲಿ ನಡೆಯಲಿದೆ.
ಕಾರ್ಯಕ್ರಮವನ್ನು ಮಾಜಿ ಸಚಿವ ಬಿ.ರಮಾನಾಥ ರೈ ಉದ್ಘಾಟಿಸಲಿದ್ದಾರೆ. ಹಿರಿಯ ಚಿಂತಕ ಅರವಿಂದ ಚೊಕ್ಕಾಡಿ ನವ ಭಾರತ ನೆಹರು ದೂರದೃಷ್ಠಿಯಲ್ಲಿ ಎಂಬ ವಿಷಯದಲ್ಲಿ ಉಪನ್ಯಾಸ ನೀಡಲಿದ್ದಾರೆ. ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿ, ನಿವೃತ್ತ ಜಿಲ್ಲಾಧಿಕಾರಿ ಎ.ಬಿ ಇಬ್ರಾಹಿಂ, ಪ್ರಗತಿಪರ ಚಿಂತಕ ವಿಲ್ಫ್ರೆಡ್ ಡಿ’ಸೋಜ, ಉದ್ಯಮಿ, ಜೆಡಿಎಸ್‌ನ ರಾಜ್ಯ ವಕ್ತಾರ ಎಂ.ಬಿ ಸದಾಶಿವ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ನೆಹರು ವಿಚಾರ ವೇದಿಕೆಯ ಮುಖ್ಯ ಸಂಯೋಜಕ ಪ್ರೋ.ಕ್ಸೇವಿಯರ್ ಡಿ’ಸೋಜ, ಸಹ ಸಂಯೋಜಕರಾದ ನವೀನ್ ರೈ ಚೆಲ್ಯಡ್ಕ ಹಾಗೂ ಶ್ರೀಪ್ರಸಾದ್ ಪಾಣಾಜೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here