ಸಾಜ ಶ್ರೀ ದುರ್ಗಾ – ವೆಂಕಟರಮಣ ಭಜನಾ ಮಂದಿರದ ಬಳಿ ಇರುವ ಸಮುದಾಯ ಭವನದಲ್ಲಿ ಭಾರತನಾಟ್ಯ ತರಗತಿ ಆರಂಭ

0

ಬಲ್ನಾಡು : ಬೆಳಿಯೂರುಕಟ್ಟೆ ಸಾಜ ಶ್ರೀ ದುರ್ಗಾ – ವೆಂಕಟರಮಣ ಭಜನಾ ಮಂದಿರದ ಬಳಿ ಇರುವ ಸಮುದಾಯದ ಭವನದಲ್ಲಿ ವಿದೂಷಿ ಶ್ರೀಮತಿ ಕಾವ್ಯ ಪೆರ್ಲ ಇವರ ನೇತೃತ್ವದಲ್ಲಿ ಭಾರತನಾಟ್ಯ ಕಲಿಕಾ ತರಗತಿಯ ಉದ್ಘಾಟನಾ ಕಾರ್ಯಕ್ರಮ ನವೆಂಬರ್ 13 ರಂದು ನಡೆಯಿತು.

ಉಮೇಶ್ ನಾಯ್ಕ ಸರೋಳಿಕಾನ ಅತಿಥಿಗಳನ್ನು ಸ್ವಾಗತಿಸಿದರು. ಬಳಿಕ ಗಣ್ಯ ಅತಿಥಿಗಳ ದಿವ್ಯಾಹಾಸ್ತದ ಮುಖಂತರ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ, ವಿದ್ಯಾರ್ಥಿಗಳ ಭಾರತನಾಟ್ಯ ಕಲಿಕೆ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು,

ಈ ಸಂದರ್ಭದಲ್ಲಿ ಶ್ರೀ ರಾಧಾಕೃಷ್ಣ ಆಳ್ವ ಸಾಜ, ಮುರಳಿಕೃಷ್ಣ ಭಟ್ ಹಸಂತಡ್ಕ, ಕುಟ್ಟಿ ನಲಿಕೆ ಕೂಟೇಲು, ಜನಾರ್ಧನ ಪೂಜಾರಿ ಕಾಡ್ಲ, ನಾರಾಯಣ ನಾಯ್ಕ ಸಾಜ ಸಾಜ, ಸುಧಾಕರ್ ನಾಯಕ್ ಹಸಂತಡ್ಕ, ಅಕ್ಷಯ್ ಶೆಟ್ಟಿ ಸಲ್ಪಾಜೆ,ರವಿ ಚಂದ್ರ ಸಾಜ, ಮತ್ತಿತರರು ಉಪಸ್ಥಿತರಿದ್ದರು.
ವಿ. ಸೂ : ಭಾರತನಾಟ್ಯ ತರಗತಿಗೆ ಸೇರಲು ಇಚ್ಚಿಸುವವರು ಶ್ರೀ ಸುಧಾಕರ್ ನಾಯಕ್ ಹಸಂತಡ್ಕ (9611697847) ಇವರನ್ನು ಸಂಪರ್ಕಿಸುವಂತೆ ವಿನಂತಿ.

LEAVE A REPLY

Please enter your comment!
Please enter your name here