ಬಿದ್ದು ಸಿಕ್ಕಿದ ಮೊಬೈಲ್ ಹಿಂತಿರುಗಿಸಿ ರಿಕ್ಷಾ ಚಾಲಕನ ಪ್ರಾಮಾಣಿಕತೆ

0

ಪುತ್ತೂರು: ಬಿದ್ದು ಸಿಕ್ಕಿದ ಮೊಬೈಲ್ ಹಿಂತಿರುಗಿಸಿ ರಿಕ್ಷಾ ಚಾಲಕರೋರ್ವರು ಪ್ರಾಮಾಣಿಕತೆ ಮೆರೆದ ಘಟನೆ ಕೋಡಿಂಬಾಡಿಯಲ್ಲಿ ನಡೆದಿದೆ.
ಪುತ್ತೂರು ಕ್ಯಾಂಪ್ಕೋ ಚಾಕಲೇಟ್ ಫ್ಯಾಕ್ಟರಿ ನಿವೃತ್ತ ಉದ್ಯೋಗಿ, ರಾಮಕುಂಜ ಗ್ರಾಮದ ಆನ ನಿವಾಸಿ ರವೀಂದ್ರರವರ ಪುತ್ರ ಶಿವಾಗ್ನಿಯವರು ನ.14ರಂದು ಬೆಳಿಗ್ಗೆ ಪುತ್ತೂರಿನಿಂದ ರಾಮಕುಂಜಕ್ಕೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ತನ್ನಲ್ಲಿದ್ದ ಸುಮಾರು 16 ಸಾವಿರ ರೂ.ಬೆಲೆ ಬಾಳುವ ಮೊಬೈಲ್ ಕಳೆದುಕೊಂಡಿದ್ದರು. ರಾಮಕುಂಜಕ್ಕೆ ತಲುಪಿದ ಬಳಿಕ ಅವರಿಗೆ ಮೊಬೈಲ್ ಕಳೆದುಹೋಗಿರುವುದು ಗಮನಕ್ಕೆ ಬಂದಿದೆ. ಕಳೆದುಹೋಗಿದ್ದ ಮೊಬೈಲ್‌ನಲ್ಲಿದ್ದ ಸಿಮ್ ನಂಬರ್‌ಗೆ ಕರೆ ಮಾಡಿದ ವೇಳೆ ಅದು ಕೋಡಿಂಬಾಡಿ ಪಾದೆ ನಿವಾಸಿ, ರಿಕ್ಷಾ ಚಾಲಕ ವಿಶ್ವನಾಥ ಎಂಬವರಿಗೆ ಸಿಕ್ಕಿರುವುದು ತಿಳಿದುಬಂದಿತ್ತು. ಶಿವಾಗ್ನಿಯವರು ಮತ್ತೆ ಪುತ್ತೂರಿಗೆ ಬಂದು ವಿಶ್ವನಾಥ ಅವರಿಂದ ತನ್ನ ಮೊಬೈಲ್ ಪಡೆದುಕೊಂಡಿದ್ದಾರೆ. ರಿಕ್ಷಾ ಚಾಲಕ ವಿಶ್ವನಾಥರವರು ಮೊಬೈಲ್ ಹಿಂತಿರುಗಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.

 

LEAVE A REPLY

Please enter your comment!
Please enter your name here