ವಿಟ್ಲ‌ಪಡ್ನೂರು ಗ್ರಾಮ ಪಂಚಾಯತ್ ನಲ್ಲಿ ಕಾನೂನು ಸೇವೆಗಳ ಅರಿವು ಕಾರ್ಯಾಗಾರ

0

ವಿಟ್ಲ:  ವಿಟ್ಲ‌ಪಡ್ನೂರು ಗ್ರಾಮ ಪಂಚಾಯತ್ ನಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ  ರೇಷ್ಮಾ ಶಂಕರಿ ರವರ ಅದ್ಯಕ್ಷತೆಯಲ್ಲಿ ಕಾನೂನು ಸೇವೆಗಳ  ಅರಿವು ಕಾರ್ಯಕ್ರಮ ನಡೆಯಿತು. ಬಳಿಕ ಮಾತನಾಡಿದ ಅವರು ಕಾನೂನಿನ ಅಜ್ಞಾನಕ್ಕೆ ಕ್ಷಮೆಯಿಲ್ಲ ಪ್ರತಿಯೊಬ್ಬರೂ ಕಾನೂನನ್ನು ತಿಳಿದುಕೊಳ್ಳಲೇ ಬೇಕು ಎಂದರು.
 ತಾಲೂಕು ಕಾನೂನು ಸೇವಾ ಸಮಿತಿಯ ಕಾನೂನು ತಜ್ಞರಾದ ಶ್ರೀ ತುಳಸಿದಾಸ್ ವಿಟ್ಲ ಹಾಗೂ ಶ್ರೀಕೃಷ್ಣ,  ಗ್ರಾಮ ಪಂಚಾಯತ್ ಸದಸ್ಯರಾದ  ಪ್ರೇಮಲತಾ,  ರೇಖಾ,  ಅಮಿತ,  ಜಯಲಕ್ಷ್ಮೀ, ವಿಟ್ಲ ಪೊಲೀಸ್ ಠಾಣಾ ಸಿಬ್ಬಂದಿ  ಅರ್ಪಿತಾ, ಒಕ್ಕೂಟದ ಎಂ. ಬಿ. ಕೆ. ವನಿತಾ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಎಲ್ ಸಿ ಆರ್ ಪಿ, ಸದಸ್ಯರು, ಹಿರಿಯ ಅರೋಗ್ಯ ಸಹಾಯಕಿ ಗೀತಾ,ಆಶಾ ಕಾರ್ಯಕರ್ತರು ಹಾಗೂ ಗ್ರಾಮ ಪಂಚಾಯತ್ ಸಿಬ್ಬಂದಿಗಳು  ಕಾರ್ಯಕ್ರಮದಲ್ಲಿ ಭಾಗವಹಿಸಿದರು.
 
 
 
 

LEAVE A REPLY

Please enter your comment!
Please enter your name here