ಉಪ್ಪಿನಂಗಡಿ ರೇಂಜ್ ಮದ್ರಸ ಮೆನೇಜ್‌ಮೆಂಟ್ ಸಮಿತಿ ಮಹಾಸಭೆ

0

ಅಧ್ಯಕ್ಷ ಅಬ್ದುಲ್ ರಹಿಮಾನ್ ಹಾಜಿ, ಪ್ರ. ಕಾರ್‍ಯದರ್ಶಿ ಯೂಸುಫ್ ಹಾಜಿ ಕೋಶಾಧಿಕಾರಿಯಾಗಿ ಝಕಾರಿಯಾ ಅಗ್ನಾಡಿ ಆಯ್ಕೆ

ಉಪ್ಪಿನಂಗಡಿ: ಇಲ್ಲಿನ ರೇಂಜ್ ಮದ್ರಸ ಮೆನೇಜ್‌ಮೆಂಟ್ 2022-23 ನೇ ಸಾಲಿನ ಅಧ್ಯಕ್ಷರಾಗಿ ಅಬ್ದುಲ್ ರಹಿಮಾನ್ ಹಾಜಿ ಕೊಳ್ಳೇಜಾಲ್, ಪ್ರಧಾನ ಕಾರ್‍ಯದರ್ಶಿ ಯೂಸುಫ್ ಹಾಜಿ ಹೆಚ್. ಹಾಗೂ ಕೋಶಾಧಿಕಾರಿಯಾಗಿ ಝಕಾರಿಯಾ ಅಗ್ನಾಡಿ ಆಯ್ಕೆಯಾಗಿದ್ದಾರೆ.

ಉಪ್ಪಿನಂಗಡಿ ಮಾಲಿಕ್ ದೀನಾರ್ ಜುಮಾ ಮಸೀದಿ ಖತೀಬ್ ಅಬ್ದುಲ್ ಸಲಾಮ್ ಫೈಝಿ ದುವಾಃದೊಂದಿಗೆ, ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷ ಸಯ್ಯದ್ ಅನಸ್ ತಂಗಳ್, ಜಿಲ್ಲಾ ವೀಕ್ಷಕರಾದ ಹಕೀಮ್ ಪರ್ತಿಪ್ಪಾಡಿ. ಇಕ್ಬಾಲ್ ಮಿತ್ತಬೈಲ್ ಶರೀಫ್ ಗೋಳ್ತಮಜಲ್ ಉಪಸ್ಥಿತಿಯಲ್ಲಿ ನಡೆದ ಮಹಾಸಭೆಯಲ್ಲಿ ಈ ಆಯ್ಕೆ ಮಾಡಲಾಗಿ ಉಳಿದಂತೆ ಪದಾಧಿಕಾರಿಗಳನ್ನು ಈ ಕೆಳಗಿನಂತೆ ಆಯ್ಕೆ ಮಾಡಲಾಯಿತು.
ಸಂಘಟನಾ ಕಾರ್ಯದರ್ಶಿಯಾಗಿ ಅಬ್ದುಲ್ ಹಮೀದ್ ಕರಾವಳಿ. ಉಪಾಧ್ಯಕ್ಷರುಗಳಾಗಿ ಕೆ.ಕೆ. ಅಬೂಬಕ್ಕರ್, ಹಕೀಮ್ ಬಂಗೇರಕಟ್ಟೆ. ಮುಹಮ್ಮದ್ ಮೋನು ಕರ್ವೇಲ್. ಜೊತೆ ಕಾರ್ಯದರ್ಶಿಗಳಾಗಿ ಯೂಸುಫ್ ಹಾಜಿ ಪೆದಮಲೆ, ಬಶೀರ್ ಮಠ ಮತ್ತು ಪತ್ರಿಕಾ ಕಾರ್ಯದರ್ಶಿಯಾಗಿ ಇಸ್ಮಾಯಿಲ್ ತಂಙಳ್ ಹಾಗೂ ಜಿಲ್ಲಾ ಸಮಿತಿ ಸದಸ್ಯರಾಗಿ ಹಾಜಿ ಮುಸ್ತಫಾ ಕೆಂಪಿ, ಅಬ್ದುಲ್ ಲತೀಫ್ ಕರಾಯ. ಶುಕೂರ್ ಹಾಜಿ ಉಪ್ಪಿನಂಗಡಿ ಆಯ್ಕೆಯಾದರು.

LEAVE A REPLY

Please enter your comment!
Please enter your name here