ನ.23 ಕ್ಕೆ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಲಕ್ಷದೀಪೋತ್ಸವ – ಸಂಕೀರ್ತನಕಾರ ರಾಮಕೃಷ್ಣ ಕಾಟುಕುಕ್ಕೆ ಅವರ ನೇತೃತ್ವದಲ್ಲಿ ಭಜನಾ ಸತ್ಸಾಂಗ

0

 

  • ಸಹಸ್ರಕ್ಕೂ ಮಿಕ್ಕಿ ಭಜಕರ ಪಾಲ್ಗೊಳ್ಳುವಿಕೆ

ಪುತ್ತೂರು: ಇತಿಹಾಸ ಪ್ರಸಿದ್ಧ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನ.23 ರಂದು ಜರುಗಲಿರುವ ಲಕ್ಷದೀಪೋತ್ಸವದಲ್ಲಿ ದೇವಳದ 18 ಎಕ್ರೆ ಜಾಗದಲ್ಲಿ ಹಣತೆಯ ಬೆಳಕು ಪ್ರಜ್ವಲಿಸಲ್ಲಿದ್ದು ಇದರ ಜೊತೆಗೆ ಸಂಜೆ ಸಹಸ್ರ ಸಂಖ್ಯೆಯಲ್ಲಿ ಭಜಕರು, ಸಂಕೀರ್ತನೆಕಾರ ಭಜನಾ ಗುರು ಮಧ್ವಾಧೀಶ ವಿಠಲದಾಸ ರಾಮಕೃಷ್ಣ ಕಾಟುಕುಕ್ಕೆಯವ ಮಾರ್ಗದರ್ಶನದಲ್ಲಿ ಭಜನೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ದೇವಳದ ಗದ್ದೆಯಲ್ಲಿ ಸಂಜೆ ಸಂಕೀರ್ತನೆಕಾರ ಭಜನಾ ಗುರು ಮಧ್ವಾಧೀಶ ವಿಠಲದಾಸ ರಾಮಕೃಷ್ಣ ಕಾಟುಕುಕ್ಕೆಯವರ ನೇತೃತ್ವದಲ್ಲಿ ಭಜನಾ ಸತ್ಸಾಂಗ ನಡೆಯಲಿದೆ. ಹಲವಾರು ಭಜನಾ ಮಂಡಳಿಗಳು ಭಜನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here