ಅಳಕೆಮಜಲು ಶ್ರೀ ಶಾರದಾಂಭ ಭಜನಾ ಮಂದಿರಕ್ಕೆ ಧರ್ಮಸ್ಥಳದ ವತಿಯಿಂದ ಧನಸಹಾಯ

0

ವಿಟ್ಲ: ಅಳಕೆಮಜಲು ಶ್ರೀ ಶಾರದಾಂಭ ಭಜನಾ ಮಂದಿರಕ್ಕೆ ಧರ್ಮಸ್ಥಳದ ವತಿಯಿಂದ ಧರ್ಮಾಧಿಕಾರಿ ಡಾ. ವಿರೇಂದ್ರ ಹೆಗ್ಗಡೆರವರು ಒಂದೂವರೆ ಲಕ್ಷ ರೂಪಾಯಿ ಆರ್ಥಿಕ ಸಹಕಾರ ನೀಡಿದರು.

ಯೋಜನಾಧಿಕಾರಿ ಚೆನ್ನಪ್ಪ ಗೌಡರವರು ಮೊತ್ತದ ಚೆಕ್ ಅನ್ನು ಭಜನಾಮಂಡಳಿಯ ಪದಾಧಿಕಾರಿಗಳಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಭಜನಾಮಂಡಳಿಯ ಪದಾಧಿಕಾರಿಗಳಾದ ಪಿ. ರಾಜಾರಾಮ ಶೆಟ್ಟಿ ಕೋಲ್ಪೆ ಗುತ್ತು, ಜಗದೀಶ್ ಪೂಜಾರಿ ಅಳಕೆಮಜಲು, ಕೃಷ್ಣಪ್ಪ ಕೆಮನಾಜೆ, ತಿರುಮಲೇಶ್ವರ ಅಳಕೆಮಜಲು, ಪ್ರದೀಪ್ ಶೆಟ್ಟಿ ಅಳಕೆಮಜಲು, ಸುಗಂಧಿನಿ ಪೆಲತಿಂಜ, ಜಯಂತಿ ಶೆಟ್ಟಿ ಅಳಕೆಮಜಲು ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here